ನಾನಿನಗೇನು| ರಂಗವಿಠ್ಠಲ ಅಂಕಿತ| ಶ್ರೀಪಾದರಾಜರ ಕೃತಿ|Lakshmi Muralidhar.

แชร์
ฝัง
  • เผยแพร่เมื่อ 24 มิ.ย. 2024
  • ನಾನಿನಗೇನು ಬೇಡುವುದಿಲ್ಲಾ ಎನ್ನ ಹೃದಯ ಮಂಟಪದೊಳು ನಿಂತಿರೋ ಹರಿಯೇ|| ಪ||
    ಶಿರನಿನ್ನ ಚರಣಕ್ಕೆ ಎರಗಿಲಿ ಎನ್ನ
    ಚಕ್ಕುಗಳು ನಿನ್ನ ನೋಡಲಿ ಹರಿಯೇ
    ಕರ್ಣ ಗೀತಂಗಳ ಕೇಳಲಿ ಎನ್ನ
    ನಾಸಿಕ ನಿರ್ಮಾಲ್ಯ ಆಫ್ರಾಣಿಸಲಿಕೃಷ್ಣಾ||೧||
    ನಾಲಿಗೆ ನಿನ್ನ ಕೊಂಡಾಡಲಿ ಎನ್ನ
    ಕರಗಳೆರಡು ನಿನಗೆ ಮುಗಿಯಲೀ ಹರಿಯೆ
    ಪಾದತೀರ್ಥಯಾತ್ರೆ ಮಾಡಲಿ ನಿನ್ನ
    ಧ್ಯಾನವ ಎನಗೆ ಕೊಡು ಕೊಡು ಕಂಡ್ಯ ಹರಿಯೆ||೨||
    ಬುಧ್ಧಿನಿನ್ನಲ್ಲಿ ಕುಣಿದಾಡಲಿ ಎನ್ನ
    ಚಿತ್ತವು ನಿನ್ನಲಿ ನಲಿದಾಡಲಿ ಭಕ್ತ
    ಜನರ ಸಂಘದೊರಕಲಿ ರಂಗ
    ವಿಠ್ಠಲ ನೀ ದಯಮಾಡೋ ಹರಿಯೆ||೩||

ความคิดเห็น • 2