ಏನು ಸುಕೃತವ ಮಾಡಿದಳೋ ಯಶೋದೆ |Enu sukruthava | ವಾದಿರಾಜರ ರಚನೆ| Lakshmi Muralidhar

แชร์
ฝัง
  • เผยแพร่เมื่อ 18 มี.ค. 2024
  • ಏನು ಸುಕೃತವ ಮಾಡಿದಳೋ ಯಶೋದೆ| ಶ್ರೀನಿಧಿ ಕೃಷ್ಣನ್ನ ಎತ್ತಿ ಮುದ್ವಿಪಳಂತೆ|| ಪ||
    ಗಂಗಾಜನಕಗೆ ಗಡಿಗೆ ನೀರೆರೆವಳಂತೆ ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ
    ತುಂಗಭೂಧರನ ತೊಟ್ಟಿಲೊಳು ತೂಗುವಳಂತೆ ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ||1/||
    ನಗವನೆತ್ತಿದವನ ಮಗುವೆಂದಿತ್ತುವಳಂತೆ ನಿಗಮಗೋಚರನ ತಾನಿಟ್ಟಿಪಳಂತೆ
    ಅಗಣಿತ ಸತ್ವನ್ನ ಹಗ್ಗದಿಕಟ್ಟುವಳಂತೆ
    ಮಿಗೆನಿತ್ಯ ತೃಪ್ತ ಗೆ ಪಾಲನೆರೆವಳಂತೆ||2||
    ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ
    ಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆ
    ಮಹಾದೈತ್ಯದಲ್ಲಣಗೆ ಬಹುಭಯವ ತೋರುವಳಂತೆ
    ಮಹಿಮ ನರಸಿಂಹಗೆ ಗುಮ್ಮನ ಕೋರುವಳಂತೆ||3||
    ಚತುರ್ಮುಖ ಪಿತನ ಸುತನೆಂದೆತ್ತುವಳಂತೆ ಶೃತಿವಿನುತಗೆ ಜೋಗುಳ ಪಾಡುವಳಂತೆ
    ಶತರವಿತೇಜ ಗೆ ಆರತಿ ಎತ್ತುವಳಂತೆ
    ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ||4||
    ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ
    ಪಡುಗಡಲ ತಡಿಯ ದ್ವಾರಕೆ ನಿಲಯನ
    ಬಿಡದೆ ನೆಲೆಸಿಹ ಹಯವದನ ಮೋಹನ
    ಮುದ್ದು ಉಡುಪಿಯ ಕೃಷ್ಣನ ಉಡಿಯೊಳೆತ್ತುವಳಂತೆ.||5||

ความคิดเห็น • 5