ಏನು ಸುಕೃತವ ಮಾಡಿದಳೋ ಯಶೋದೆ |Enu sukruthava | ವಾದಿರಾಜರ ರಚನೆ| Lakshmi Muralidhar
ฝัง
- เผยแพร่เมื่อ 18 มี.ค. 2024
- ಏನು ಸುಕೃತವ ಮಾಡಿದಳೋ ಯಶೋದೆ| ಶ್ರೀನಿಧಿ ಕೃಷ್ಣನ್ನ ಎತ್ತಿ ಮುದ್ವಿಪಳಂತೆ|| ಪ||
ಗಂಗಾಜನಕಗೆ ಗಡಿಗೆ ನೀರೆರೆವಳಂತೆ ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ
ತುಂಗಭೂಧರನ ತೊಟ್ಟಿಲೊಳು ತೂಗುವಳಂತೆ ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ||1/||
ನಗವನೆತ್ತಿದವನ ಮಗುವೆಂದಿತ್ತುವಳಂತೆ ನಿಗಮಗೋಚರನ ತಾನಿಟ್ಟಿಪಳಂತೆ
ಅಗಣಿತ ಸತ್ವನ್ನ ಹಗ್ಗದಿಕಟ್ಟುವಳಂತೆ
ಮಿಗೆನಿತ್ಯ ತೃಪ್ತ ಗೆ ಪಾಲನೆರೆವಳಂತೆ||2||
ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ
ಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆ
ಮಹಾದೈತ್ಯದಲ್ಲಣಗೆ ಬಹುಭಯವ ತೋರುವಳಂತೆ
ಮಹಿಮ ನರಸಿಂಹಗೆ ಗುಮ್ಮನ ಕೋರುವಳಂತೆ||3||
ಚತುರ್ಮುಖ ಪಿತನ ಸುತನೆಂದೆತ್ತುವಳಂತೆ ಶೃತಿವಿನುತಗೆ ಜೋಗುಳ ಪಾಡುವಳಂತೆ
ಶತರವಿತೇಜ ಗೆ ಆರತಿ ಎತ್ತುವಳಂತೆ
ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ||4||
ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದ
ಪಡುಗಡಲ ತಡಿಯ ದ್ವಾರಕೆ ನಿಲಯನ
ಬಿಡದೆ ನೆಲೆಸಿಹ ಹಯವದನ ಮೋಹನ
ಮುದ್ದು ಉಡುಪಿಯ ಕೃಷ್ಣನ ಉಡಿಯೊಳೆತ್ತುವಳಂತೆ.||5||
🙏🙏🙏⭐⭐⭐⭐⭐🙏🙏
🙏🙏