Kannada Bhavageethe | Sidilirada Mugile | ಸಿಡಿಲಿರದ ಮುಗಿಲೇ | Raghavendra Beejadi | Inspirational song
ฝัง
- เผยแพร่เมื่อ 15 ก.ย. 2024
- Kannada Folk song - Sidilirada Mugile
Music & Sung by - Raghavendra Beejadi
Lyrics - Vinayaka Aralasurali
Orchestrartion - Sameer Rao
Tabala - Aatmaram Nayak
Recording & Mastering - Vinay Rangadhol
Editing - Jayant Kumar T.V.
#kannadabhavageethagalu #kannadafolksongs #sadsong
ಸಿಡಿಲಿರದ ಮುಗಿಲೇ, ಮಗುವಿರದ ಮಡಿಲೇ,
ಕೊರಗದಿರು ಕುಡಿವ ನೀರಿರದ ಕಡಲೇ..
ಮರುಗುವರು ಇಲ್ಲಿಲ್ಲ ನಿನ್ನ ಮೊರೆಗೆ..
ಮುರಿದ ಮರ ತಂತಾನೇ ಚಿಗುರಬೇಕು;
ನದಿ ಯಾರ ಬಳಿ ದಾರಿ ಕೇಳಬೇಕು?
ಕಣ್ಣಲ್ಲೆ ಕಂದೀಲು ಇರುವಾಗ ಇರುಳಲ್ಲಿ
ಚಂದಿರನ ಬಳಿಯೇಕೆ ಬೇಡಬೇಕು?
ಭಾವಗಳ ಮುಗಿಲು ಹೃದಯದೊಳಗಿರಲು
ಮಳೆಸುರಿಸದಿರುವವೇ ಈ ಕಂಗಳು?
ಸೆಳೆವ ಸುಳಿಯಾಚೆ ನೆಮ್ಮದಿಯ ದಡವೋ
ಮುಳುಗಲೇಬೇಕು ನೀ ಏರೋ ಮೊದಲು.
ಎಣ್ಣೆ ಮುಗಿದೊಡನೆ ಮುಗಿದೀತೇ ಬೆಳಕು?
ಉರಿಯುಂಟು ಎದೆಯಲ್ಲೆ ಕೇಳೇ ಹಣತೆ;
ಇರುಳಿನ ದಾರಿಯಲೇ ಬರಬೇಕು ಹಗಲು
ಬಿರುಗಾಳಿ ಮುಗಿದೊಡನೆ ನಿನ್ನ ಸರತಿ..
ಕೀಳಲೇಬೇಕು ಚುಚ್ಚಿರುವ ಮುಳ್ಳ,
ನೋವಿಗೆ ಅಂಜಿದರೆ ಮಾಯಲೆಂತು?
ಜೀವನದ ಬತ್ತಿ ಉರಿಯಲೇಬೇಕು,
ಸಾವಿಗೆ ಹೆದರಿದರೆ ಬಾಳಲೆಂತು?
ವಿನಾಯಕ ಅರಳಸುರಳಿ.
ಯಾವ ಹಾಡ ಹಾಡಬೇಕು
ನೋವ ಮರೆಯಲು?
ನಮ್ಮ ತಂಡದ ಇನ್ನೊಂದು ಭಾವಗೀತೆ:
th-cam.com/video/rBZaOiemTMA/w-d-xo.html
Aa11a1
ಸಿಡಿಲಿನ ಮುಗಿಲೇ ಸಾಹಿತ್ಯವನ್ನು ಪ್ರಸಾರ ಮಾಡಿ ಧನ್ಯವಾದಗಳು
ತುಂಬಾ ಚೆನ್ನಾಗಿದೆ.
❤ ಮೋಟಿವೇಷನ್ ಸಾಂಗ್
@@siddappateli3471😊
ನಮ್ಮ ಕನ್ನಡದ ಸಾಹಿತ್ಯವನ್ನ /ಅದರ ಅಂತರಾಳವನ್ನ /ಅದರ ಚೆಂದವನ್ನ /ಭಾವವನ್ನ / ಕನ್ನಡಿಗರೇ ಬಲ್ಲರು ,,,,,ಮನ ಮುಟ್ಟುವ ಹಾಡು ❤,,,,,,ಬೆಂಕಿ ಹಾಡು 🥳🥳
Mana mutuva hadu❤❤❤ thank you sir
ಏನ್ ಗುರುವೆ ನೀನು ಪ್ರತಿ ಸಾರಿ ಸಂಗೀತ ಸಹೃದಯಿಗಳ ಮನಸು ಮಟ್ಟುತ್ತಿರ. ❤
ತುಂಬಾ ಚೆಂದದ ಸಾಹಿತ್ಯಕ್ಕೆ ಒಳ್ಳೆಯ ಸಳೆತವಿರುವ ರಾಗ, ಆಳ ದನಿಯ ಕಂಠ ಸಿರಿಯಲ್ಲಿರುವ ಈಹಾಡು ಕೇಳಿದಷ್ಟು ಕೇಳಬೇಕು ಅನ್ನಿಸುತ್ತಿದೆ
Yeshtu chennagide ...wow
ಪ್ರೀತಿ ಆಗೋಯ್ತು,,, ಹಾಡಿನ ಮೇಲೆ ❤💐🙏
Nangu hageayitu ellarigu agolla
ಸಾಹಿತ್ಯ ತುಂಬಾ ತುಂಬಾನೇ ಚೆನ್ನಾಗಿದೆ. ಯಾವ ಹಿರಿಯ ಸಾಹಿತಿಗಳ ಬರವಣಿಗೆಗೂ ಕಡಿಮೆ ಇಲ್ಲ. ಅರ್ಥಗರ್ಭಿತ... ಸಾಲುಗಳು...
ಇನ್ಮುಂದೆ ನಾ ಸದಾ ಈ ಗೀತೆಯನ್ನು ಕೇಳುತ್ತಿರುತ್ತೇನೆ.. ನಿನಗೆ ಶುಭವಾಗಲಿ...
I never miss listening this melodious meaning full song. God bless the singer.
ಸೂಪರ್ ಸಾಹಿತ್ಯ ಸೂಪರ್ ರಾಗ❤
ಹೃದಯ ಪೂರ್ವಕ ನಮನಗಳು 🙏🙏🙏
ಮನದಾಳದ ನೋವುಗಳ ಮರೆಸಿ,ಬದುಕಿಗೆ ಸ್ಪೂರ್ತಿ ನೀಡುವ ಗೀತೆ.
I have listened to this beautiful song benidicted by this person. It haunts when I sit in any place. Very masculine and melodious. God bless the singer.
ಪ್ರತಿಯೊಂದು ಮಾತು ಸತ್ಯ ಎನಿಸುತ್ತದೆ.. 👌🏻👌🏻👌🏻
ಸಾಹಿತ್ಯ , ಗಾಯನ ಅದ್ಬುತ
3:45 ಎಣ್ಣೆ ಮುಗಿದೊಡನೆ ಮುಗಿದೀತೆ ಬೆಳಕು ಉರಿಯುಂಟು ಎದೆಯಲ್ಲೇ ಕೇಳೆ ಹಣತೆ ... ❤️ಸಾಹಿತ್ಯ 👌
ಸಾಹಿತ್ಯ ಅದ್ಬುತ. ಬರೆಯುತ್ತಲೆ ಇರಿ.
ನೋವಾದಾಗೆಲ್ಲ ಈ ಹಾಡು ಧೈರ್ಯ ನೀಡುತ್ತದೆ ..ಅದ್ಭುತ ಸಾಲುಗಳು ಅದ್ಭುತ ಭಾವ ..🎉
ತುಂಬಾ ಚೆನ್ನಾಗಿದೆ... ಭಾವ ಪೋಣಿಸುವಿಕೆ ಸೊಗಸಾಗಿದೆ...
ಅರ್ಥಪೂರ್ಣ ರಚನೆ, ಹಾಗೆಯೇ ಗಾಯನ, ಚಿತ್ರಣ ಕೂಡ
This singing is beyond comments. Such flawless soulful rendition. It just touches your heart. I listen to singing every day, but after years I experienced such transcendence of emotions. My salute to the singer. 🙏🙏🙏
Excellent lines.. ಸಾಹಿತ್ಯದಲ್ಲಿ ನಮ್ಮ ಜೀವನ ಅಡಗಿದೆ.. ಅರ್ಥಗರ್ಭಿತವಾದ ಸಾಲುಗಳು.
ಅದ್ಭುತ ಹಾಡು
ಅದೆಷ್ಟು ಅರ್ಥಗರ್ಭಿತ ಸಾಲುಗಳು..
ವಾವ್ಹ್ 🙏
Bavapoorna hadu👌
ಸಾಹಿತ್ಯ ತುಂಬಾ ಚನ್ನಾಗಿದೆ , ಹಾಗೇ ಹಾಡಿದ್ದು ರಾಗ ಸಂಯೋಜನೆ, ಚಿತ್ರೀಕರಣ ಸೊಗಸಾಗಿದೆ ಭಾವನಾತ್ಮಕ ಕವಿತೆ , ಒಳ್ಳೆಯದಾಗಲಿ
ಭಾವಪೂರ್ಣವಾದ ಹಾಡು ಚೆನ್ನಾಗಿ ಹಾಡಿದ್ದೀರಿ
ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಭರವಸೆಯ ಬೆಳಕು ಅಭಿನಂದನೆಗಳು
Okgood
ಆಹಾ!! ಅದ್ಬುತ ಸಾಹಿತ್ಯ. ಇಂಪಾದ ಗಾಯನ
ವ್ಹಾ!! ಎಂಥಾ ಸಾಹಿತ್ಯ, ಅದ್ಭುತ .ನಿಮ್ಮ ಧ್ವನಿಗೆ ಕೀವಿಯಾದ ನಾವುಗಳೇ ದನ್ಯ. ರಾಘವೇಂದ್ರ ಬಿಜಾಡಿ ಯವರಿಗೆ ನಮ್ಮೆಲ್ಲರಿಂದ ಅನಂತ ಕೋಟಿ ಧನ್ಯವಾದ. 🙏🏼
ತುಂಬಾ ಚೆನ್ನಾಗಿದೆ ..
Very good sahithya meaningful super👍 singing🎤 God bless you🙏
ಸರ್ ಮೊದಲು ನಿಮ್ಮ ಜ್ಞಾನಕ್ಕೆ ನನ್ನದೊಂದು ದೊಡ್ದ ನಮನ, ಅಕ್ಷರ ಬಳಕೆಗಂತೂ ನನ್ನ ಅನಂತ ಅನಂತ ನಮನಗಳು ಸರ್
ಸಾಹಿತ್ಯ, ಸಂಗೀತ ಸಂಯೋಜನೆ ಎಲ್ಲವೂ ಚೆನ್ನಾಗಿ ಇದೆ
ಆಹಾ...ಎಂತಾ ಚೆಂದದ ಸಾಲುಗಳು, ಅದ್ಬುತ ಸಂಗೀತ...ಕೇಳುತ್ತಲೇ ಇರಬೇಕಿನ್ನು... 🙏🙏🙏
ಸುಂದರವಾದ ಸಾಹಿತ್ಯ. ಸೊಗಸಾದ ಗಾಯನ👌🏻👌🏻🌹🌹
ಮತ್ತೆ ಮತ್ತೆ ಕೇಳಬೇಕೆನ್ನುವ ಸಾಹಿತ್ಯ & ಸಂಗೀತ ❤❤❤
ಅರ್ಥ ಗಂಭೀರವಾದ ಸಾಹಿತ್ಯ ಸರ್. ನಿಮ್ಮ ಪದ ಸಂಯೋಜನೆಗೆ ಸ್ವರ ಗಾಂಭೀರ್ಯತೆ ಗೆ ನನ್ನ ಹೃತ್ಪೂರ್ವಕವಾದ ನಮನಗಳು ಸರ್. ನಮಗೆ ಇನ್ನೂ ಮಕ್ಕಳಾಗಿಲ್ಲ ಸರ್ ಇದನ್ನು ಕೇಳಿ ಕೊರಗಬಾರದು ಅಂತ ಅಂದುಕೊಂಡಿದ್ದೆವು ಸಿಂಹದ ಹುಲಿಯ ಬಾಯಿಗೆ ಸಿಕ್ಕಿದರು ಜನಗಳ ಅನಿಷ್ಟ ಮಾತುಗಳಿಗೆ ಸಿಲುಕಿ ಒದ್ದಾಡುತ್ತಿದ್ದೇವೆ
ನಮಸ್ತೇ. ನಿಮಗೆ ಹೇಗೆ ಸಮಾಧಾನ ಹೇಳುವುದೋ ಕಾಣೆ. ಏನೇ ಹೇಳಿದರೂ ಅದು ತೋರುಗಾಣಿಕೆಯಾದೀತು. ನಿಮ್ಮ ಮನಸ್ಸಿಗೆ ಕೆಲ ಕ್ಷಣದ ನೆಮ್ಮದಿ ಕೊಟ್ಟರೆ ನಮ್ಮೀ ಹಾಡು ಧನ್ಯವಾದಂತೆ. ಮುಂದೆ ಒಳಿತಾಗಲಿ ಎಂದು ಹಾರೈಸುತ್ತೇವೆ.
-ಗುಬ್ಬಿಪುಕ್ಕ ತಂಡ.
ಮಕ್ಕಳಿಲ್ಲದಿರುವುದು ಕೊರಗಲ್ಲ.....ಮಗು ಮನದ ಮನಸಿರದಿರೆ ಕೊರಗು.....ನಿಮ್ಮೆಲ್ಲ ಒಳಿತುಗಳ ಮೊತ್ತವೇ ಮಗುವಂತೆ....ಚಿಂತಿಸದಿರಿ...ಒಳ್ಳೆಯ ಮನಸಿಗೆ ಒಳ್ಳೆಯದೇ ಆಗುತ್ತದೆ
ಮಕ್ಕಳಿರುವವರ ನೋವ ನೀವು ಕಾಣಿರಿ..! ಎಲ್ಲಾ ಮಕ್ಕಳ ನಿಮ್ಮದೆಂದು ಭಾವಿಸಿ ಪ್ರೀತಿ ಹಂಚಿರಿ..! ಜಗದ ನಿಂದೆಗೆ ಮನಸಾರೆ ನಕ್ಕುಬಿಡಿ...! ಸಂಗಾತಿಯೊಡನೆ ಬದುಕ ಸಂತಸದಿಂದ ಕಳೆಯಿರಿ..! ಜಗದ ಜನರೊಳು ನೆಮ್ಮದಿ ಹುಡುಕುವುದು ಸಂತೆಯೊಳಗೆ ನಿರವ ಮೌನ ಹುಡುಕಿದಂತೆ..! ಚಿಂತೆ ತೊರೆದು ಬದುಕಿನೊಳು ನೆಮ್ಮದಿಯಿಂದ ಬದುಕಿರಿ..!
ಗುರುಧಯೇ ಇರಲಿ ನಿಮಗೆ ಎಲ್ಲವು ಸಾಧ್ಯ
ಮುಗಿಲು ಮನದಲ್ಲಿ ಇರುವಾಗ ಮಳೆಯಾಗಿ ಸುರಿದರೆ.ತಾಯ್ತನ ಭಾವವಿದ್ದರೆ ನೀವು ತಾಯಿಯಲ್ಲವೇ.
ತುಂಬಾ ಚಂದದ ಸಾಹಿತ್ಯ 👌👌👌
ಅದ್ಭುತ! ಅತ್ಯದ್ಭುತ !!! ಬದುಕಿನ ಬಂಡಿಯ ಸಾಹಿತ್ಯ 👌👌👌👌👌👌👌👌👌👌👌👌👌👌👌👌🙏🙏🙏🙏🙏
Awesome ❤
?Just awesome sir
Wonderful song
ಭಾವಪೂರ್ಣವಾಗಿದೆ 👌👌👌 ಸಾಹಿತ್ಯ, ಸಂಗೀತ ,ಗಾಯನ ಎಂದಿನಂತೆ ಸುಂದರವಾಗಿದೆ👌👌
ಒಂದೊಂದು ಪದವೂ ತುಂಬಾ ಅರ್ಥಗರ್ಭಿತವಾಗಿದೆ ❤️
ತುಂಬು ಹೃದಯ ಧನ್ಯವಾದಗಳು 🙏🙏🙏 ಸರ್.
Our Karnataka life is heaven life ❤
What a beautiful song ❤ congratulations sar❤
Super ❤
ಮತ್ತೆ ಮತ್ತೆ ಕೇಳಬೇಕೆಸುವ ಮದುರ ಗೀತೆ
ಅಭಿನಂದನೆಗಳು ಸರ್
ಸಾಹಿತ್ಯದಲ್ಲಿನ ಸಾತ್ವಿಕತೆಗೆ, ಧ್ವನಿಯಲ್ಲಿ ನ ಮಾರ್ಧವತೆಗೆ ಸಾವಿರ ಶರಣು 🙏🏻🙏🏻🙏🏻🙏🏻🙏🏻🙏🏻 ಕಣ್ಮುಚ್ಚಿ ಕೇಳುತ್ತಿದ್ದರೆ ನಾವೇ ನೀಲಿಯಾಗಸದಲ್ಲೋ ಸಾಗರದಲ್ಲೋ ತೇಲಿದಂತೆ.... ಎಲ್ಲಾ ಭಾವ ಬಂಧನಗಳಿಂದ ಮುಕ್ತವಾದಂತೆ ಭಾಸವಾಗುತ್ತೆ... ❤️😍
ಅದ್ಭುತವಾದ ಸಾಲುಗಳು ...ಕೇಳುತ್ತಲೇ ಇರಬೇಕು ಎಂದೆನಿಸುತ್ತಿದೆ ..ಇಲ್ಲಿ ಯಾರು ಯಾರಿಗೂ ಇಲ್ಲ ನಮ್ಮ ಜೀವನಕ್ಕೆ ನಾವೇ ಎಲ್ಲ .ಜೀವನದ ಬತ್ತಿ ಉರಿಯಲೇ ಬೇಕು ಸಾವಿಗೆ ಹೆದರಿದರೆ ಬಾಳಲೆಂತು... ಸಾಯುವವರೆಗೆ ಬದುಕಲೇಬೇಕು...ಉಪ್ಪು ಮನುಷ್ಯರಾಗಿ ಹುಟ್ಟಿ ಬಂದಿರುವುದೇ ಸಾಯುವುದಕ್ಕೆ ಅಲ್ಲವೇ ?ಸಾಯುವ ಮೊದಲು ಏನಾದರು ಸಾಧಿಸಬೇಕು.
Saahithya chennagide singer too good gives bhaava to the lyrics good team work
ಹಾಡು ಮನಮುಟ್ಟುವಂತಿದೆ 👌💐👍
😊👏
ಸಾಹಿತ್ಯ, ಗಾಯನ ಮತ್ತು ಸಂಗೀತ ಎಲ್ಲವೂ ಅದ್ಭುತ
ಸೂಪ್ಪರ್
ಒಂದೊಂದು ಸಾಲುಗಳು ಮನಮುಟ್ಟುತ್ತವೆ...ಅಹಾ!!!!🙏😍
Heart' touch ❤ arthaghrbitavada hadu
ಏನ್ ಸರ್ ಸಾಹಿತ್ಯ,,,ಎಂಥ ಅದ್ಭುತ ಗಾಯನ ಒಂದು ಕ್ಷಣ ಮೈ ಝುಂ ಅಂತು,ಸೂಪರ್ ಸರ್🙏🙏🙏🙏
Feeling's ge yeshtondu hatra ide ee hadu sotorigoskarane bardiro hagide thank you
Nice lyrics and singing
ಬಹಳ ವರ್ಷ ಗಳ ನಂತರ ಸೊಗಸಾದ ಮತ್ತು ಅರ್ಥ ಪೂರ್ಣ ಭಾವ ಗೀತೆಗಳು ಕೇಳಿ ಬರುತ್ತಿವೆ. ಧನ್ಯವಾದಗಳು 🙏
ಚಂದ.... ಭಾವಪೂರ್ಣ ಭಾವಗೀತೆ....
ಅದ್ಭುತವಾದ ಸಾಹಿತ್ಯ ಸರ್ 🙏🙏.. ಮುಂದುವರೆಯಲಿ ನಿಮ್ಮ ಸಾಹಿತ್ತೊತ್ಸವ... 🙏
ಮನಮುಟ್ಟುವ ಸಾಹಿತ್ಯಅಧ್ಭುತವಾಗಿದೆ....🙏🙏💐💐👌👌
ಅರ್ಥಪೂರ್ಣವಾದ ಸಾಹಿತ್ಯ ಮನಮುಟ್ಟುವ ಗೀತರಚನೆ ಅದ್ಬುತ. ಧನ್ಯವಾದಗಳು ಕೋಟಿ ನಮನಗಳು
ಸಾಹಿತ್ಯ, ಚಿತ್ರಣ, ಪ್ರಸ್ತುತಿ ಒಟ್ಟಿನಲ್ಲಿ ಮನಮೋಹಕ👌
ನಾನು ಪ್ರತಿದಿನ ಬೆಳೆಗ್ಗೆ ಕೇಳುವ... ಹಾಡು.. ಇದೇ.. ಪ್ರತಿದಿನ ಕೇಳಿದಾಗಲೂ ಹೊಸದೆನಿಸುತ್ತದೆ... ಅದ್ಭುತ!!#bhashaloka
ಚಂದದ ಪ್ರಯತ್ನ, ಶುಭವಾಗಲಿ ಗೆಳೆಯ
ಸಾಹಿತ್ಯ ನಿಜಕ್ಕೂ ತುಂಬಾ ಅರ್ಥಗರ್ಭಿತವಾಗಿದೆ.
ಅಥ೯ ಸಮಥ೯ವಾಗಿ ಮೂಡಿಬಂದಿದೆ
Tumba chennagide…👌👌
ಅದ್ಭುತ ಹಾಗೂ ಅರ್ಥಪೂರ್ಣವಾಗಿದೆ 👌👌
ಭಾವನಾತ್ಮಕ ಬರಹಗಳ ವೀಣೆ ತಂತಿಯಂತೆ ಮನದ ಭಾವನೆಯ ಸ್ವರಗಳು 👌👌👌
Wow sahitya Sangeeta ಗಾಯನ ತುಂಬಾ ಆಪ್ತವಾಗಿದೆ
ಮನಮೋಹಕ ಪ್ರಸ್ತುತಿ👌
ತುಂಬಾ ಚೆನ್ನಾಗಿದೆ ಸಾಹಿತ್ಯ 🙏🤩😍
👍👍 Good lyrics
ಮನಮುಟ್ಟುವ ಗೀತೆ,ಸಂಗೀತ, ಸಾಹಿತ್ಯ ,
ವಾಹ್! ಅದ್ಭುತ ಸಾಹಿತ್ಯ.
ಅನನ್ಯ ಭಾವಲಹರಿ.
ಅಭಿನಂದನೆಗಳು ಸರ್ 🌹
Sir ಸಾಹಿತ್ಯ ತುಂಬಾ ತುಂಬಾ ಚೆನ್ನಾಗಿದೆ. ಕಣ್ಣಲ್ಲಿ ನೀರು ತರಿಸುವ ಸಾಹಿತ್ಯ ಕಣ್ಣಲ್ಲಿ ತರಿಸುತ್ತದೆ ಅಂದರೆ ಸಾಹಿತ್ಯದ ಆಳ ಅಷ್ಟು ಅರ್ಥ ಪೂರ್ಣ ವಾಗಿದೆ. ಅದ್ಭುತ sir. ಇನ್ನು ಹಾಡಿದವರ ಕಂಠ ಅಷ್ಟು ಇಂ ಪು ಪುನಃ ಪುನಃ ಕೇಳುವ ಹಂಬಲ.
❤
I
ಅಣ್ಣಯ್ಯ 😍😘😘😘😘😘ಮಸ್ತ್ ಸಾಂಗ್ ಅಣ್ಣ
ಎಷ್ಟು ಸಾರೆ ಕೇಳಿದರೂ ನನ್ನ ದಣಿವು ತಣಿಯುತ್ತಿಲ್ಲ ಪ್ರತಿ ಸಾರಿ ಕೇಳಿದಾಗಲೂ ಕಣ್ಣೀರು ಬರುತ್ತೇ ಅತ್ಯದ್ಭುತ ಸಾಹಿತ್ಯ ಮತ್ತು ಗಾಯನ
ಸಾಹಿತ್ಯಕ್ಕೆ ತಕ್ಕ ಧ್ವನಿ, ಧ್ವನಿಗೆ ತಕ್ಕ ತಾಳ👌
ಆಹಾ ಮನಸು ಹಗುರ ಅನಿಸ್ತು🙏😊
Super. Thank you
ಅತಿ ಸುಂದರ, ಅರ್ಥಗರ್ಭಿತವಾಗಿದೆ. ❤️
ಆಹಾ! ಚಂದ ಇದೆ ಸಾಹಿತ್ಯ ಹಾಡಿದ್ದೂ
ತುಂಬಾ ಚೆನ್ನಾಗಿದೆ, ಒಳ್ಳೆಯ ಸಾಹಿತ್ಯ, ಸಂಗೀತ, ರಾಗ ಮತ್ತು ಧ್ವನಿ.
Super hradaya ಮುಟ್ಟಿದ ಗೀತೆ...ಅದ್ಭುತ ಗಾಯನ ,
ವಣೀ೯ಸಲು ಪದಳೆ ಇಲ್ಲ....ಅದ್ಬುತ್
Another Shakespeare....! Bhasha panditya mechhuvantadde...
Nice lyrics
ಒಳ್ಲೆಯ ಸಾಹಿತ್ಯ ಕನ್ನಡತನ ಗಟ್ಟಿ ಗೊಳಿಸೂ ಸಂಗೀತ ಉತ್ತಮ ಗಾಯನ ಒಟ್ಟಾರೆ ತಂಡಕ್ಕೆ ಧನ್ಯವಾದಗಳು ❤❤
ಹೃದಯ ತಟ್ಟಿದ ಗಾಯನ...,😘👌👌👌
Ennatha adbuta saahitya nimmadu sir thank you
Very nice voice.
I like this song and listen without miss.
ಮೌನೆಯಾದೆ.!
ಇನ್ನು ಸಾವಿರಕ್ಕೂ ಹೆಚ್ಚು ಹರ್ಷ ಇರಲ್ಲಿ ನಿಮ್ಮ ಧ್ವನಿ ❤️❤️❤️
Tabalist atmaram all the best
ಅತೀ ಉತ್ತಮ.ಅನಂತ ಧನ್ಯವಾದಗಳು.
ತುಂಬಾ ಚೆನ್ನಾಗಿದೆ.. ಸಾಹಿತ್ಯ, ಸಂಗೀತ ಎರಡೂ ಅದ್ಭುತ..
ಬಹಳ ಅರ್ಥಗರ್ಭಿತ, ಸೋತ ಮನಗಳಿಗೆ ಭರವಸೆಯ ಬೆಳಕು...ಸಾಹಿತ್ಯಬರೆದವರಿಗೆ ಧನ್ಯವಾದಗಳು🙏🙏
Super