ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 05

แชร์
ฝัง
  • เผยแพร่เมื่อ 9 ก.ย. 2024
  • ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ವರ್ಷ ನಡೆಸಿದ್ದರು. ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಪಾಕ್ಷಿಕಗಳಲ್ಲಿ ವ್ಯಾಸರು 120ಕ್ಕೂ ಹೆಚ್ಚು ಕಥೆ ಸೇರಿದಂತೆ ಲೇಖನಗಳನ್ನು ಬರೆದಿದ್ದು, 250 ಬಿಡಿ ಕವನಗಳನ್ನು ಬರೆದಿದ್ದರು. ಅವರು 2008 ರಲ್ಲಿ ನಿಧನರಾದರು.
    ಕಂಬನಿ, ಕೃತ, ಸ್ನಾನ, ತಪ್ತ, ಅಸ್ತ್ರ, ಕೆಂಡ, ಕಾಂತ, ದಡ, ಓಟ (ಕತೆಗಳ ಸಂಕಲನ)
    ಸುಳಿ, ಸೃಷ್ಟಿ, ಕ್ಷೇತ್ರ (ಕವನ ಸಂಕಲನ)
    ಜನಪಥ, ಮೌನಗರ್ಭ (ಲೇಖನಗಳು)
    __
    ಎಂ ವ್ಯಾಸ ನಮ್ಮನೆಲ್ಲ ಆಗಲಿ ಈ ವರ್ಷ ಜುಲೈ ೨೪ಕ್ಕೆ ಹದಿನಾರು ವರ್ಷಗಳು, ಅವರ ನೆನಪಿನಲ್ಲಿ ಎರಡು ವರ್ಷದ ಹಿಂದೆ ಕ್ಲಬ್ ಹೌಸ್ ನಲ್ಲಿ ನಡೆಸಿದ ದೀರ್ಘ ಮಾತುಕತೆ, ಚರ್ಚೆ, ಓದು ಈ ಸರಣಿಯಲ್ಲಿ.
    ಅವರನ್ನು ಮತ್ತೆ ಮತ್ತೆ ನೆನಸಿಕೊಳ್ಳಲು ಒಂದು ಸಕಾರಣ ಅಷ್ಟೇ
    ಮಿಸ್ ಯೂ ವ್ಯಾಸ
    -
    ಕೃತಜ್ಞತೆಗಳು ~
    ಪ್ರಶಾಂತ್ ಭಟ್, ವರದರಾಜ ಚಂದ್ರಗಿರಿ, ನಾ ದಾಮೋದರ ಶೆಟ್ಟಿ, ಮುರುಳಿಧರ ಉಪಧ್ಯಾಯ, ಜಿ ಎನ್ ಮೋಹನ್, ಪ್ರತಿಮಾ ವ್ಯಾಸ, ಭಾರತಿ ಬಿವಿ, ಸ್ವಾಮಿ, ರಾಜು, ಜೋಗಿ

ความคิดเห็น •