Irabeku iruvante ( ಇರಬೇಕು ಇರುವಂತೆ)
ฝัง
- เผยแพร่เมื่อ 21 ก.ย. 2019
- Lyrics:- Dr H S Venkateshmurthy
Music:- Raghavendra beejadi
Instrumentation:- Sameer rao
singer :- Raghavendra beejadi
we use some images from Google.. our humble pranamas to all the artists..
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ||ಪ||
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು||೧||
ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ ತುಂಬಿ ನದಿಯು
ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು||೨||
ರಚನೆ ಎಚ್ಚೆಸ್ವಿ
ಸಂಗೀತ ರಾಘವೇಂದ್ರ ಬೀಜಾಡಿ - เพลง
ಯಾರ್ಯಾರು 2024 ರಲ್ಲಿ ಕೇಳುತ್ತಿದ್ದೀರಿ ಲೈಕ್ ಮಾಡಿ
ಲೆಕ್ಕ ಇಟ್ಟಿದ್ದೇನೆ ಇದು 157ನೇ ಬಾರಿ ನಾನು ಕೇಳುತ್ತಿರುವುದು ಪ್ರತಿ ಬಾರಿಯೂ ಹೊಸ ದಾಗಿ ಕೇಳಿದಂತಿದೆ 👌👌👌🙏🙏
ನಿಮ್ಮ ಅಭಿಮಾನ ದೊಡ್ಡದು ... ಚಿರ ಋಣಿ ನಾನು..
ನನಗಂತೂ ಗೊತ್ತೇ ಇಲ್ಲ, ಎಷ್ಟು ಬಾರಿ ಕೇಳಿಯಾಗಿದೆ ಅಂತ……. ಪ್ರತೀಬಾರಿ ಕೇಳಿದಾಗಲೂ ಮನಸ್ಸು ಹಗುರಾಗುತ್ತೆ………
even i feel same mam..
Same here .
Super sir nivu
ಈ ಹಾಡು ಪ್ರತಿದಿನ ಮೂರು-ನಾಲ್ಕು ಸಲ ಕೇಳದೆ ಇದ್ರೆ ಏನೋ ಒಂತರ ಮನಸ್ಸಿಗೆ ನೆಮ್ಮದಿ ಇರಲ್ಲ ಗೊತ್ತಿಲ್ಲ ಯಾಕಂದ್ರೆ ಪ್ರತಿದಿನ ಕೇಳ್ತಾ ಇರ್ತೀನಿ ಪ್ರತಿ ದಿನ ಎರಡು ಮೂರು ಸಲ ಅಂತ ಕೇಳೇ ಕೇಳ್ತೀನಿ ಹಾಡನ್ನು ನಿಮಗೆ ಯಾರಿಗೆಲ್ಲ ಇಷ್ಟ ಅವರು ಲೈಕ್ ಮಾಡಿ,❤❤❤❤❤❤❤❤❤❤❤❤❤❤❤❤❤❤
2024 ಆದರೂ ಇನ್ನೂ ಕೇಳಬೇಕು ಅನಿಸುವ ಹಾಡು
ಬರೆಯಬೇಕು ನಿಮ್ಮಂತೆ
ಹಾಡು ಬೇಕು ನಿಮ್ಮಂತೆ
ಜನರು ಸಾಲಾಗಿ ನಿಂತು ಕೇಳುವಂತೆ
ಎಲ್ಲರಿಗೂ ಅಭಿನಂದನೆಗಳು ಸರ್
ಸಾಲಾಗಿ ನಿಂತು ಅಲ್ಲ" ಮೈಮರೆತು ಕೇಳುವಂತೆ" ಸೂಕ್ತ ಅನಿಸಲ್ಲವೇ ಸರ್
Waahhhh
Woww your lines also amazing
❤
Super lines sir
ಅರ್ಥಪೂರ್ಣ ಹಾಡು 👌👌ಯಾರದ್ದೊ ವ್ಯಾಟ್ಸಪ್ ಸ್ಟೆಟಸ್ ನಲ್ಲಿ ಕೆೇಳಿದ ಸಾಲುಗಳು ಕರೆತಂತು ನನ್ನಿಲ್ಲಿಗೆ 😍
ನಾನೂ ಕೂಡ....
ನಾನೂ ಕೂಡ
ಎಂಥ ಸಾಹಿತ್ಯ!!!
ನನಗೂ ಸಹ ಇಲ್ಲಿಗೆ ಕರೆತಂತು
Same bro♥️
ನಾನು ಪದೇ ಪದೇ ಕೇಳುವ ಹಾಡು...
ನನ್ನ ಒಂದು ವರ್ಷದ ಮಗು ಮಲಗುವುದು ಇದೆ ಹಾಡಿನಿಂದ... ಕನ್ನಡದ ಅರ್ಥಗರ್ಭಿತ ಹಾಡುಗಳಲ್ಲಿ ಇದೂ ಒಂದು ❤️
Super ❤
ಮಕ್ಕಳಿಂದ ದೂರ ಇಡಿ ಮೊಬೈಲ್ ಅನ್ನು
Thumba santhosha kannadigare
So sweet🥳
ಈ ಹಾಡನ್ನು ಅಶ್ವಥ್ ನಾರಾಯಣ ಅವರ ಕಂಠದಿಂದ ಕೇಳಬೇಕು ಎಂದು ಆಸೆ ಇರುವವರು ಲೈಕ್ ಮಾಡಿ 👍🏻👇❤
ಎಷ್ಟೆಲ್ಲ ಅರ್ಥಪೂರ್ಣ ಕವಿತೆಗಳು ಇಷ್ಟು ಸಮಯ ಸುಪ್ತವಾಗಿಯೇ ಇದ್ದವು. ಈಗ ಕೇಳುವಾಗ ರೋಮಾಂಚನವಾಗುತ್ತದೆ. ಧನ್ಯವಾದಗಳು ನಿಮಗೆ.
ಅಹುದು ಕವಿವರ್ಯ 🙏
👍
ಇಂತಾ ಹಾಡುಗಳು ಮನಸನ್ನು ಸಂತೈಸಲು ಆ ಪರಮಾತ್ಮನೇ ಸೃಷ್ಟಿಸುತ್ತನೇ..ಮನಸ್ಸು ಭಾವನಲೋಕದಲ್ಲಿ ತಲ್ಲಿನವಾಗಿ ಬದುಕು ಸಾರ್ಥಕ ಎನಿಸುವುದು...❤❤.
ಇರಬೇಕು ದ್ವನಿ ನಿಮ್ಮಂತೆ
ನಲಿಬೇಕೂ ಮನಸು ಚಿಗರೆಯಂತೆ
ಕರಗಲಿ ಚಿಂತೆ ಚಿತೆಯಂತೆ
ಇರಬೇಕು ಎಲ್ಲರಿಗೂ ಆಸರೆಯಂತೆ
🙏🙏🙏
👌😇
🎉
ನೊಂದ ಜೀವಕ್ಕೆ ಸಾಂತ್ವನ ಹೇಳುವಂತಿದೆ ಈ ಗೀತೆ...ಗಾಯಕರೆ, ರಚನೆಕಾರರೆ ನಿಮಗಿದೊ ಅನಂತ ಧನ್ಯವಾದಗಳು
ನಿಜ,,ಸ್ಪೂರ್ತಿದಾಯಕವಾಗಿದೆ ಸೋತರು,, ಮತ್ತೆ ಮತ್ತೆ ಗೆಲ್ಲುವ ಸ್ಪೂರ್ತಿ,,,
ನಿಜ
ಹೌದು ಏನೋ ನೆಮ್ಮದಿ ಸಿಗುತ್ತೆ ಸುಮಧುರ ಕಂಠ
Yestu artha adagide e hadalli ..yenta yede biriv novidru kuda .e haadu kelata idre jeevakke samadhan sigutte ..hadiruv gayakarige nann namaskar ....nimm voice Alli yestu madhuravad bhavane adagide ..tq..
@@arerarerarer8351 ,,,,,*,,*lzzzzzzzz,sA Ez🎉E,s
ಕನ್ನಡ ನೆಲದಲ್ಲಿ ಹುಟ್ಟಿದ ನಾವೆಲ್ಲಾ ಪುಣ್ಯವಂತರು.... ಹೆಚ್.ಎಸ್.ವಿ.ಕವಿಗಳಿಗೆ ನನ್ನ ನಮನಗಳು😘💐
ಎಷ್ಟು ಕೇಳಿದರೂ ಮನಸ್ಸಿಗೆ ತೃಪ್ತಿಯೇ ಸಿಗುವುದಿಲ್ಲ,ತುಂಬ ಬೇಜಾರಿದ್ದಾಗ ನಾನು ಕೇಳುವುದು ಇದ ಗೀತೆಯನ್ನು,ಧನ್ಯವಾದ ಬರೆದವರಿಗೆ,ಹಾಡಿದವರಿಗೆ ಅಭಿನಂದನೆಗಳು
ನಿಜ್ವಾಗ್ಲೂ ಸಮಾಜದ ಬಗ್ಗೆ ಅಪಾರ ಕಾಳಜಿ ಇಟ್ಕೊಂಡು ಕೆಲಸ ಮಾಡೋರಿಗೆ ಈ ಸಾಲುಗಳು ಕಣ್ಣಲ್ಲಿ ನೀರು ತರಿಸದೇ ಇರೋಕೆ ಸಾಧ್ಯವಿಲ್ಲ... 👌🏻🙏🏻
ಎಂತಹ ಅರ್ಥಪೂರ್ಣ ಸಾಹಿತ್ಯ.... ಇದುವೇ ಕನ್ನಡಕ್ಕಿರುವ ಶಕ್ತಿ...❤
ಖಂಡಿತವಾಗಿಯೂ ಈ ಹಾಡನ್ನು ಒಂದು ಸಲ ಕೇಳಿ ಸುಮ್ಮನಿರಲು ಸಾಧ್ಯವೇ ಇಲ್ಲ 👌👌
ಅಧ್ಬುತ ಗಾಯನ..ಅಷ್ಟೇ ಅಧ್ಬುತ ಸಾಹಿತ್ಯ..ಬದುಕಿನ ಅರ್ಥಪೂರ್ಣ ವಾದ ಹಾಡು😍👌🙏🙏🙏
ನಾನಂತೂ ಈ ಅದ್ಭುತ ಗಾಯನಕ್ಕೆ (ಗಾಯನ ಸಿರಿಗೆ) ಮೈಮರೆತು ಮಾರುಹೋಗಿದ್ದೆನೆ ಕೆಳಿದಷ್ಟು ಇನ್ನಷ್ಟು ಕೇಳಬೇಕೆನಿಸುತ್ತಿದೆ ತುಂಬಾದ ಇಂಪಾದ ಗಾಯನ ತಂಪಾದ ತಂಗಾಳಿ ಅಲೆಯಂತೆ ಸೂಸಿ ಬರುತ್ತದೆ. ಈ ಸುಮಧುರ ಸಂಗೀತ.
ಒಳ್ಳೆ ಹಾಡು ಕೇಳಿ ದಿನಕ್ಕೊಮ್ಮೆ
ಈ ಹಾಡು ಕೇಳಿದರೆ ಕನ್ನಡ, ಕನ್ನಡ ಸಾಹಿತ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ 🙏🙏, ಎಷ್ಟೊಂದು ಶ್ರೀಮಂತಿಕೆ......
ಅತ್ಯದ್ಭುತ ಸಾಹಿತ್ಯ, ಪ್ರತಿ ದಿನ ಕೇಳುತ್ತೇನೆ ಮನಸ್ಸಿಗೆ ಬೇಸರವಾದಾಗ ಸತತವಾಗಿ ಅರ್ಧ ಗಂಟೆ ಸಾಂಗ್ ಕೇಳುತ್ತೇನೆ ❤❤❤❤❤
ಈ ಹಾಡು ಕೇಳಿದರೇ ಹಾಗೆ ಕೇಳಬೇಕು ಅನಿಸುತ್ತದೆ ಮತ್ತೆ ಮನಸ್ಸು ಸಮಾಧಾನ ಆಗಿತ್ತದೆ ನನ್ನಾ ಎಲ್ಲ ನೂವು ಮರೆಯುತ್ತದೆ ನಿಮ್ಮ ಧ್ವನಿ ಕೂಳಲೂ ತುಂಬ ಖುಷಿ ಕೊಡುತ್ತ 🙏🙏🙏
ಒಮ್ಮೆ ಕೇಳಿದವರಿಗೆ ಇನ್ನೊಮ್ಮೆ ಕೇಳದೆ ಇರಲಾಗದಂತ ಕೆಲವೇ ಗೀತೆಗಳಲ್ಲಿ ಇದೂ ಒಂದು.
ಎಷ್ಟು ಬಾರಿ ಕೇಳಿದ್ದೇನೆ ಎಂದು ಲೆಕ್ಕವಿಡಲು ಸಾದ್ಯವಿಲ್ಲ... ಕಾರಣ ಪ್ರತಿಬಾರಿ ಕೇಳುವಾಗಲೂ ಹೊಸ ಚೈತನ್ಯ ತುಂಬುತ್ತಿದೆ.
ಈ ಹಾಡು ಕೆಳಿದಾಗ ಎನೂ ವಂತರ ಮನಸಿಗೆ ಸಮಾದಾನ .
ನನ್ನ ಮುಂಜಾವು ಈ ಅರ್ಥಗರ್ಭಿತ ಹಾಡಿನಿಂದ ಶುರುವಾಗುತ್ತದೆ. ಧನ್ಯವಾದಗಳು.
ಕನ್ನಡದ ಪದಗಳು ಮುತ್ತುಗಳಿದಂತೆ ,,ಕನ್ನಡ ನಾಡಿನಲ್ಲಿ ಹುಟ್ಟಿದ ನನ್ನ ಜನ್ಮ ಪುಣ್ಯ 🌹
ಎಷ್ಟೇ ನೋವಿದ್ದರೂ ಈ ಹಾಡು ಕೇಳಿದಾಕ್ಷಣ ಎಲ್ಲವನ್ನು ಮರೆತುಬಿಡಬಹುದು.... ಎಲ್ಲ ನೋವನ್ನು ಮರೆಸುವ ಶಕ್ತಿ ಈ ಹಾಡೊಳಗಡಗಿದೆ🙏
ನನ್ನ ಬದುಕಿನ ಭಗವದ್ಗೀತೆ, ಮನಸ್ಸು ಅಲ್ಲೋಲ ಕಲ್ಲೋಲ ವಾದಾಗ ಈ ಗೀತೆ ಆಲಿಸಿದಾಗ ಮನಸು ಶಾಂತಿ ಸಾಗರ, ಕವಿಗಳು , ಗಾಯಕರಿಬ್ಬರಿಗೂ ಅನಂತಆನಂತ ನಮಸ್ಕಾರ
ಗಳು 🌹
ಹೃದಯದ ತರಂಗ ಮೀಟುವ ಸಾಹಿತ್ಯ, ಮತ್ತೆ ಕೋಗಿಲೆಯ ಕಂಠದಿಂದ ಹೊಮ್ಮುವ ಗಾಯನ, ತುಂಬಾ ಚೆನ್ನಾಗಿದೆ.
ನೊಂದ ನನ್ನ ಮನಕ್ಕೆ ಈ ಗೀತೆ ತುಂಬಾ ಹೋಲಿಕೆ ಯಾಗುತಿದೆ, ತುಂಬಾ ಧನ್ಯವಾದ
ಆಹಾ ಸಾರ್ಥಕ ಭಾವನೆ ಮೂಡುತ್ತಿದೆ 🙏 ನಿಮ್ಮಂತ ಸಾಧಕರನ್ನ ಪಡೆದ ಕನ್ನಡ ನಾಡಿನ ಕನ್ನಡಿಗರ ಪುಣ್ಯ 💐 ಈ ಗೀತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ 🙏 ಜೈ ಕನ್ನಡಾಂಬೆ 💐
ಅದ್ಬುತ ಸಾಹಿತ್ಯ, ಅತ್ಯದ್ಭುತ ಗಾಯನ, ಹೃದಯದ ಒಳಗಿಳಿವ ಸಂಗೀತ. ಧನ್ಯೋಸ್ಮಿ
Nice lyrics sir.... devotional music❤❤😊😊
ಲೆಕ್ಕವಿಲ್ಲದ್ದಷ್ಟು ಭಾರೀ ಕೇಳಿದೆ. ಮತ್ತೇ ಮತ್ತೇ ಕೇಳಬೇಕು ಎಂದು ಪ್ರತಿಸಲವೂ ಅನಿಸುತ್ತದೆ.🙏🙏🙏👌👌💕
ಇಂದಿನ ಜಂಜಡದ ಬದುಕಿನ ಮರುಭೂಮಿಯಲ್ಲಿ ಓಯಸಿಸ್ ನಂತೆ ಮೂಡಿ ಬಂದಿರುವ ಅತ್ಯದ್ಭುತ ಸಾಹಿತ್ಯ ಉತ್ಕೃಷ್ಟ ಸ್ವರ ಸಂಯೋಜನೆ ಸುಮಧುರ ಗಾಯನ ಪುನಃ ಪುನಃ ಕೇಳಿದರೂ ಮತ್ತೆ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಸರ್ವರಿಗೂ ಧನ್ಯವಾದಗಳು
ಡಾ.ಹೆಚ್.ಎಸ್.ವಿ ರವರ ರಚನೆ ನಿಜಕ್ಕೂ ಜೀವನದುದ್ದಕ್ಕೂ ಪ್ರೇರಣೆ ನೀಡುತ್ತದೆ. ಅವರಿಗೆ ನನ್ನ ಅಭಿನಂದನೆಗಳು.
ಈ ಹಾಡು ಜನರ ಮನಸಿನ ಭಾವನೆಗಳ ಲೋಕದಲಿ ಹಾಡಿಸಿ ಅವರ ಮನಸ್ಥಿತಿಯನ್ನು ಸಮ ಸ್ಥಿತಿಗೆ ತಂದು ಬದುಕು ಇನ್ನೂ ಹಸಿರಾಗಿದೆ ಎಂದು ತಿಳಿಸುವಂತ ಅದ್ಭುತವಾದ ಹಾಡು.
Well said
ನೋವಿನಲ್ಲಿ ಇದ್ದ ಮನಸ್ಸು ಈ ಹಾಡು ಕೇಳಿದರೆ ಮನಸ್ಸು ಮುಗಿಲಿನಷ್ಟೇ ಹಗುರವಾಗುತ್ತದೆ.. 🙏
Nija...novidda manasu athu athu haguraguthade. E hadu kelidagella kannanchinalli neeru
ಈ ಹಾಡನ್ನು ಕೇಳುವಾಗ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ... ತುಂಬಾ ಅರ್ಧ ಗರ್ಭೀತವಾಗಿದೆ. ಸೂಪರ್
ಅಹೋರಾತ್ರ ಸರ್ ಬರೆದಿರುವುದು ಹಾಡುಗಳನ್ನ ನೀವು ಹಾಡಿರುವ ಎಲ್ಲ ಹಾಡುಗಳೂ ಅದ್ಬುತ ಸರ್ ನಿಜಕ್ಕೂ
ಅಹೋರಾತ್ರ ಸಾರ್ ಅಲ್ಲ....ಎಚ್ ಎಸ್ ವೆಂಕಟೇಶ್ ಮೂರ್ತಿ ಸಾರ್
ಇದೊಂದು master piece... 👌
ದಶಮಾನಕ್ಕೆ ಒಂದೇ ಈ ಥರದ ಹಾಡು ಹುಟ್ಟುವುದು..
ಧನ್ಯವಾದಗಳು ಎಲ್ಲರಿಗೂ ಈ ಹಾಡನ್ನು ನಮಗೆ ತಲುಪಿಸಿದ್ದಕ್ಕೆ 🙏
ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
ಬಹಳ ಬೇಸರವಾದಾಗ ಈ ಹಾಡು ಕೇಳಿ Refresh ಆಗ್ತೇನೆ 😍😍😍
ನಾನು ಕೂಡ ಹಾಗೆಯೆ ಸರ್... ಬೇಸರವಾದಾಗ ಗುನುಗಿಕೊಳ್ತೇನೆ ಈ ಹಾಡು
Including me also..
@@RaghavendraBeejadi ಸರ್ ನಾನು ದಿನಾಲೂ ಹಾಡು ಕೇಳಿನೆ ಮಲಗೋದು..
ಸತ್ಯವಾದ ಮಾತು...
ಹಾಗೆ ಬಾಳಿಸು ಗುರುವೇ ಕರುಣೆ ಇಟ್ಟು
"ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ" ಎಂತಹ ಅತ್ಯದ್ಭುತ ಸಾಲುಗಳುಇದನ್ನು ಬರೆದಂತ ನಮ್ಮ ಕವಿಗೆ ಮತ್ತು ಹಾಡಿದವರಿಗೆ ನನ್ನ ಸಾವಿರ ಕೋಟಿ ಧನ್ಯವಾದಗಳು 💐💐💐💐💐💐💐💐💐💐💐💐
❤
❤
ಯಾರದೋ ಸ್ಟೇಟಸ್ ನನ್ನನ್ನು ಇಲ್ಲಿಗೆ ಕರೆ ತಂದಿತು ಮತ್ತೆ ಮತ್ತೆ ಕೇಳುವಂತೆ ಮಾಡಿದೆ.
ಮನಸೂರೆಗೊಳುವ ಅದ್ಭುತ ಸಾಹಿತ್ಯ🙏ಜೀವನದ ಅನುಭವ ಸಾಕಾರಗೊಳಿಸಿದ ಕೃತಿ.ಲೇಖಕರಿಗೆಅನಂತ
ಧನ್ಯವಾದಗಳು .ಸಂಗೀತವೂ ತುಂಬಾಚನ್ನಾಗಿ ಮನ ಮುಟ್ಟುವಂತಿದೆ.ಕನ್ನಡ ಸಾಹಿತ್ಯ ಶ್ರೀಮಂತ ವಾಗಲು ಇಂಥಹ
ಕೃತಿಗಳು ಹೀಗೇ ಮೂಡಿಬರಲಿ ಧನ್ಯವಾದಗಳು
ರೇಡಿಯೊದಲ್ಲಿ ತೇಲಿ ಬಂದ ಈ ಹಾಡು ಕೇಳಿ ಯಾರ ಹಾಡು
ಎಷ್ಟು ಅದ್ಭುತವಾಗಿದೆ ಎಂದು ಯೋಚಿಸುವಾಗ ನನ್ನಮೋಮ್ಮಗನಿಗೆ ನೀನು ಎಲ್ಲಾದೂ ಹಾಡುವದಿದ್ದರೆ ಈ ಹಾಡನ್ನೇಹಾಡು ಎಂದಿದ್ದೆ ಅವನ ಈ ಹಾಡು ತುಂಬಾ ಚನ್ನಾಗಿ ಬಂದಿದೆ ಅವನೇ ನನ್ನ ಇಲ್ಲಿ ಕರೆ ತಂದ
ಬಂದೆ ಇಲ್ಲಿಗೆ ಆಕಸ್ಮಿಕವಾಗಿ
ಮರುಳಾದೆ ಗೀತೆಯ ಮಾಧುರ್ಯಕ್ಕೆ.
ಮೊದಲ ಬಾರಿಗೆ ಕೇಳಿದಾಗ ಶಿವಮೊಗ್ಗ ಸುಬ್ಬಣ್ಣನವರು ಹಾಡಿದಂತೆ, ಕೇಳದಂತಿತ್ತು
ಈ ಹಾಡು ಕೇಳಿದ ಪ್ರತಿ ಸಲವೂ ಕಣ್ಣು ತೇವವಾಗುತ್ತವೆ ನನ್ನನ್ನು ತುಂಬಾ ಭಾವಕಳನ್ನಾಗಿ ಮಾಡುತ್ತದೆ. ತುಂಬಾ ಚಿಂತನೆಗೆ ಹಚ್ಚುತ್ತದೆ. ಇಂತಹ ಅದ್ಭುತ ಸಾಹಿತ್ಯಕ್ಕೆ ನಾನು ಅಭಾರಿ....
Me Too
2023 ಯಾರ್ಯಾರು ಕೇಳ್ತಿದ್ದೀರಿ ಹೇಳಿ ಸ್ನೇಹಿತರೇ ✌️
2024 ಇವಾಗ್ಲೂ ಕೇಳ್ತಾನೆ ಇದೀವಿ......😊
Hwduuu
2023 to next 70years song
ನೂರು ಸರಿ ಕೇಳಿದರು ಕೇಳುತ್ತಿರಬೇಕು ಎನ್ನುವ ಹಾಡು
ಭಾಷೆಯ ಹಿರಿಮೆ ಹೆಚ್ಚಿಸುವ ಸಾಹಿತ್ಯ...ಸಾಹಿತ್ಯಕ್ಕೆ ನಿಜ ಭಾವ ತುಂಬುವ ಸಂಗೀತ ಗಾಯನ ....ಧನ್ಯೋಸ್ಮಿ.🙏🙏
ಇಂಪಾದ ಗಾಯನ ಅಷ್ಟೇ ಅದ್ಭುತವಾದ ಸಾಹಿತ್ಯ
ಅಭಿನಂದನೆಗಳು
ಬಾಳಿಗೆ ಧನ್ಯತಾ ಭಾವ ಮೂಡಿಸುವ ಹಾಡು.
ಯಾವ ವಿಷಯವಾಗಲಿ, ಒಳ್ಳೆಯ ಇಚ್ಛಾ ಶಕ್ತಿ ಇಟ್ಟು ನೋಡಿದರೆ ಅದು ಚೆನ್ನಾಗಿ ಕಾಣುತ್ತದೆ ಮತ್ತು ಬದುಕಿಗೆ ಸ್ಪೂರ್ತಿ ತುಂಬುತ್ತದೆ.
ಈ ಹಾಡನ್ನು ಮತ್ತೆಮತ್ತೆ ಕೇಳಬೇಕು ಅಂತ ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ ಸರ್. ಸಿಕ್ಕಿರಲಿಲ್ಲ.
ಯಾವಾಗಲೂ ಪೇಸ್ ಬುಕ್ ನಲ್ಲಿ ಕೇಳುತ್ತಿದ್ದೆ. ಅದೆಷ್ಟೋ ಸರಿ ಕೇಳಿರುವೇನೊ ನನಗೆ ಲೆಕ್ಕ ಸಿಗುತ್ತಿಲ್ಲ.
ಅಂತು ಇವತ್ತು ಶಿವರಾತ್ರಿ ಸಾರ್ಥಕವಾಯ್ತು. ಮತ್ತೆ ನಿಮ್ಮ ದನಿಯಲ್ಲಿ ಕೇಳುವ ಅವಕಾಶ ಒದಗಿಸಿದ ಆ ಶಿವ.
ಕವಿಗಳಿಗೆ, ಗಾಯಕರಿಗೆ ನನ್ನ ನೂರೊಂದು ಪ್ರಣಾಮಗಳು. 🙏🙏
ನೆನ್ನೆ ರಾತ್ರಿ ಮೊದಲ ಬಾರಿಗೆ ಈ ಹಾಡು ಕೇಳಿದೆ. ಆಗಿನಿಂದ ಕಡಿಮೆ ಅಂದರೂ ಬಹುಶಃ ಒಂದು 15 ಬಾರಿಯಾದರೂ ಕೇಳಿರಬಹುದು .. ಈ ಒಂದೇ ಹಾಡು ಸಾಕಾಯಿತು ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಅಭಿಮಾನಿಯಾಗಲು. ಅವರ 'ಲೋಕದ ಕಣ್ಣಿಗೆ ರಾಧೆಯು ಕೂಡ ' ಹಾಡನ್ನು ಮೊದಲು ಗುನುಗುತ್ತಿದ್ದೆ ಆದರೆ ಈ ಹಾಡು ನನ್ನನ್ನು ಮರುಳು ಮಾಡಿತು. ❤️❤️
ಅತ್ಯದ್ಭುತ ಗೀತೆ🙏🙏🙏
ಎಷ್ಟು ಬಾರಿ ಕೇಳಿದರೂ ಹೊಸದೇ, ಸ್ಫೂರ್ತಿದಾಯಕ, ನೆಮ್ಮದಿ ನೀಡುವ ಗಾಯನ...
ಸಾವಿರ ಪ್ರಣಾಮಗಳು, ಎಲ್ಲರಿಗೂ 🙏🙏🙏
ಆಹಾ.... ಅದ್ಭುತವಾದ ಸಾಹಿತ್ಯ ದಾ ಜೊತೆಗೆ ಅಮೋಘ ವಾದ ಧ್ವನಿ 😍🙏
ಅದೆಷ್ಟು ಅರ್ಥ ಪೂರ್ಣವಾದ ಸಾಹಿತ್ಯ 👏👏
ఈ జన్మ ధన్యం అయింది నాకు ఈ పాట అంత మధురంగా వుంది. పాడినవాలకి నా పాదాభివందనాలు 🙏🙏🙏🙏🙏🙏🙏
ಲಾವಣ್ಯರವರೆ...ನಿಮಗೆ ತುಂಬು ಹೃದಯದ ಧನ್ಯವಾದಗಳು.ಕವಿತೆಯ ಭಾವನೆಗೆ ಸ್ಪಂದಿಸಿದ್ದಕ್ಕೆ...
😊
Theluguvalu kannadavalu grateful but me mata super
Well net meaningful songs will steal our hearts even if they are not understood fully .... Power of music is unlimited.
ಅತ್ಯದ್ಭುತವಾದ ಸಾಹಿತ್ಯ ಹಾಗೂ ಗಾಯನ. ಮತ್ತೆ ಮತ್ತೆ ಕೇಳುವಂತಾಗಿದೆ
ಅದ್ಬುತ ರಚನೆ ಕಣ್ ಮುಚ್ಚಿ ಆಲಿಸುತಿದ್ದರೆ ಸಾವಿರ ಚಿಂತೆ ಮರೆತು ಹೋಗುತ್ತದೆ ಇಂತರ ಸುಂದರ ಗೀತೆ ಪಡೆದ ನಾವೇ ಧನ್ಯರು
ಅದ್ಬುತ ಸಾಹಿತ್ಯ.. ಅತ್ಯದ್ಭುತ ಗಾಯನ 🙏
ಸಾಹಿತ್ಯಮಯವೀ ಬದುಕಿನಂತಿದೆ ಗೀತೆ..ಕಾಣದ ಬ್ರಹ್ಮನೆ ಗೀಚಿದಂತೆ.💖🙏
ಮತ್ತೆ ಮತ್ತೆ ಕೇಳಬೇಕು ಎನಿಸುವ ಗೀತೆ..... ಪ್ರತಿ ಬಾರಿ ಕೇಳಿದಾಗಲೂ ಅದೇ ತನ್ಮಯ ಭಾವ.... ರಾಘಣ್ಣನ ಧ್ವನಿ ಅದ್ಭುತ.....
ಸಪ್ತ ಸಾಗರದಾಚೆ ಎಲ್ಲೊ side B effect 😍😍😍
Who searched this song after listening this song in saptha sagaradache side B 😊
ಈ ಹಾಡು ಬರೆದವರಿಗೆ, ಸಂಗೀತ ಸಂಯೋಜನೆ ಮಾಡಿದವರಿಗೆ, ಹಾಡಿದವರಿಗೆ... ಕೋಟಿ ಧನ್ಯವಾದಗಳು...👌👌👌👌👌🌸🙏🌹🌹
Super 🙏🏻🙏🏻🙏🏻
ಬರೆದವರು ನಮ್ಮ ದಾವಣಗೆರೆ ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ
ವಾವ್ ಸೂಪರ್ 👌🏽
H S ವೆಂಕಟೇಶಮೂರ್ತಿ ಅವರ ಸಾಹಿತ್ಯಕ್ಕೆ ನನ್ನ ನಮನಗಳು... ಒಂದೊಂದು ಶಬ್ದವು ಮುಗಿಲಿನಿಂದ ಬಿದ್ದಂತಿವೆ.. ಅದ್ಬುತ...😍😍
ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವಂತಹ ಅರ್ಥಪೂರ್ಣ ಸಾಹಿತ್ಯ ಮತ್ತು ಗಾಯನ👌👌
ಮಳೆ ಸುರಿಸಿ ಅಗುರಾದ ಮುಗಿಲಿನಂತೆ. ಎಂತಹ ಅದ್ಭುತವಾದ ಸಾಲುಗಳು ಮತ್ತೆ ಮತ್ತೆ ಕೇಳಬೇಕೆ ಎನ್ನುವ ಆಸೆ, 👌🙏.
ಇಷ್ಟು ದಿವಸ ಎಲ್ಲಿ ಕಳೆದು ಹೋಗಿದೆ ನಾನು? ಇಂಥ ಅದ್ಭುತ ಗೀತ ಸಾಹಿತ್ಯ ಇಲ್ಲದೆ.
ಮನಸ್ಸು ರಿಲ್ಯಾಕ್ಸ್ ಆಯ್ತು.. ಮೊದಲ ಭಾರಿ ಈ ಹಾಡು ಕೇಳುತ್ತಿದ್ದೇನೆ... ಸಂಗೀತ ಸಂಯೋಜನೆ, ಸಾಹಿತ್ಯ ಅದ್ಬುತ..🙏🙏🙏
Dvd
ನಿಮ್ಮ ಸಾಹಿತ್ಯ ಬರವಣಿಗೆಗೆ ನನ್ನ ಕೋಟಿ ನಮನಗಳ👏
ಈ ಹಾಡು ಕೇಳಿದಾಗೆಲ್ಲಾ ಏನೋ ಮನದಲ್ಲಿ ಶಾಂತಿ, ಹಗುರ, ಸಮಾಧಾನ ಸಿಗುವುದು.🙏👌
ಅಮೋಘ ರತ್ನಮಾಲೆಯಂತಹ ಹಾಡು ಹಾಡಿನಲ್ಲಿ ಬರುವ ಪ್ರತಿಯೊಂದು ಪದವೂ ಮೈ ಝುಮ್ಮೆನಿಸುವಂತಹದು ಗಾಯನವಂತೂ🙏
ವಾವ್ ಅಣ್ಣಾ...! ವಜ್ರದ ಕಂಠದಿಂದ ಮುತ್ತಿನ ಸುರಿಮಳೆ ಸುರಿದಂತೆ ಇದೆ... ಅದ್ಭುತ ಗಾಯನ 👌♥️
ನಿಜ....ಹಾಗೇ ಅನಿಸುತ್ತದೆ.
👌ಹೋಲಿಕೆ
ಜೀವನಕ್ಕೆ ಒಂದು ಪಾಠ ಈ ಹಾಡು...
ನನಗೆ ಇದನ್ನು ಕೇಳಿದಷ್ಟು ಮನಸಿಗೆ ಸಮಾಧಾನ. ದಿನಕ್ಕೆ ಒಂದು ಬಾರಿ ಈಗಲೂ ಕೇಳ್ತೀನಿ. 👏👏
ನೀರಲ್ಲಿ ಮಂಜು ಕರಗಿದಂತೆ ಈ ಸಾಹಿತ್ಯದಲ್ಲಿ ಮನಸು ಕರಗಿತು.....🙏
💞💞
ತುಂಬಾ ಅಮೋಘವಾದ ಸಂಗೀತ,ಸಾಹಿತ್ಯ,ಗಾಯನ.ನಿಮಗಿದೋ ನನ್ನ ಅನಂತ ಅನಂತ ವಂದನೆಗಳು.
ಯಾರು 2023 ಈ ವರ್ಷದಲ್ಲಿ ಈ ಹಾಡನ್ನು ಕೇಳುತ್ತಿದ್ದೀರಿ ಒಂದು ಲೈಕ್ ಮಾಡಿ
ಬದುಕು ಸಾಕು ಎನ್ನಿಸಿದಾಗ ಈ ಹಾಡು ಕೇಳಿಸಿದರೆ ಅದುವೇ ಸಂಜೀವಿನಿ ಯಾಗಿ ಕೆಲಸ ಮಾಡುವುದು....ಧನ್ಯವಾದ... ಅದ್ಭುತ ರಚನೆ
ನನ್ನ ಸಾವಿರ ಚಿಂತನೆಯನ್ನು ದೂರ ಮಾಡಿದ ಕವಿತೆ... ನನ್ನಲ್ಲಿ ಚೈತನ್ಯಯನ್ನುಂಟು ಮಾಡಿದ ಕವಿತೆ..
ಅದ್ಭುತವಾದ ಸಂಗೀತ, ಸಾಹಿತ್ಯ ಹಾಗೂ ಗಾಯನಕ್ಕಾಗಿ ಧನ್ಯವಾದಗಳು
ಕೆಲವೊಮ್ಮೆ ಇಂತಹ ಹಾಡು ಗಳನ್ನು ಕೇಳುವಾಗ... ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ... ಯಾಕೆಂದರೆ.... ಇರಬೇಕು ಇರುವಂತೆ... ಈ ಸಾಲು ತುಂಬಾ ಅರ್ಥ ಗರ್ಭಿತವಾಗಿದೆ.. ♥️♥️♥️♥️🙏🙏
ಅಧ್ಬುತವಾದ ಹಾಡು ಮನಸ್ಸು ಹಗುರಾಯಿತು,ಹೃದಯ ಕುಣಿಯಿತು,ಧನ್ಯವಾದಗಳು ಸಂಗೀತ ಬಳಗಕ್ಕೆ💐💐💐
ಇದು ಪಠ್ಯದ ಭಾಗವಾಗಬೇಕು, ಅರ್ಥಗರ್ಭಿತ ಮತ್ತು ನಿಸ್ವಾರ್ಥತೆಯನ್ನು ಎದೆಯಲ್ಲಿ ಬಿತ್ತುವಂತಿವೆ ಸಾಲುಗಳು
ಎಚ್ ಎಸ್ ವಿ ಅವರ ಸಾಹಿತ್ಯ , ನಿಮ್ಮ ಧ್ವನಿ ಮತ್ತು ಸಂಗೀತದ ಮೂಲಕ ನಮ್ಮೆಲ್ಲರ ಹೃದಯದ ಬಾಗಿಲು ತೆರೆಯುತ್ತದೆ, ತೆರೆಯುವಾಗ ಕಣ್ಣು ಒದ್ದೆಯಾಗುತ್ತದೆ. 🙏🌺
ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳ ಬೇಕೆನ್ನುವ ಹಂಬಲ❤❤❤❤
Hi
ಬದುಕಿನ ಬವಣೆಯನ್ನು ಹಗುರವಾಗಿಸುತ್ತದೆ ಈ ಹಾಡು,,ಓ ಕವಿಯೇ, ನಿನ್ನ ಭಾವಪ್ರಪಂಚಕ್ಕೊಂದು ಸಲಾಂ.
ನಿಮಗೆಲ್ಲರಿಗೂ ದೊಡ್ಡ ನಮನಗಳು ಎಂಥ ಅರ್ಥ ಇದೆ ಸರ್ ಇದ್ರಲ್ಲಿ ನಾನು ಯಾವುದೇ ವಿಷಯ ಆದ್ರೂ ತುಂಬಾ ಚಿಂತೆ ಮಾಡ್ತಾ ಇದ್ದೆ ಸರ್ ಈ ಹಾಡು ಕೇಳಿದ ಮೇಲೆ ಮನಸ್ಸು ತುಂಬಾನೇ ರಿಲೇಕ್ಸ್ ಅಯ್ತು ಸರ್ ನಿಮಗೆಲ್ಲರಿಗೂ ಮತ್ಹೋಮ್ಮೆ ತುಂಬು ಹೃದಯದ ಧನ್ಯವಾದಗಳು ಇಂಥ ಹಾಡನ್ನು ಬರೆದಿದ್ದಕ್ಕೆ 🙏🙏🙏🙏🙏
ಎಷ್ಟು ಕೇಳಿದರು ಇನ್ನು ಇನ್ನು ಕೆಳಬೇಕೆನ್ನುವ ಹಾಗಿದೆ
ಭಾರವಾದ ಮನಸ್ಸು ಹಗುರ ವಾಗಬೇಕಾದರೆ ಹಿಂತಹ ಹಾಡು ಕೇಳಬೇಕು
ಕೇಳಿದ ಮೊದಲಬಾರಿಗೆ ಇದರರ್ಥ ಮನ ಮುಟ್ಟಿತು... ಎಂತಹ ಸಾಹಿತ್ಯ ಇಂತಹ ಗಾಯನ 👏👏
ಈ ಹಾಡು ಕೇಳಿದಾಗಲೆಲ್ಲ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅಷ್ಟೊಂದು ಅದ್ಭುತವಾಗಿ ಮೂಡಿ ಬಂದಿದೆ ಈ ಹಾಡು ರಾಘವೇಂದ್ರ ಬೀಜಾಡಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು
ಅದ್ಬುತ ಸಾಹಿತ್ಯ ,ಅದ್ಬುತವಾದ ಸಂಯೋಜನೆ,ಮನಸ್ಸಿನ ದುಗುಡ ದೂರವಾಗುವ ಅನುಭವ
ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವಷ್ಟು ಸೊಗಸಾಗಿ ಹಾಡಿದ್ದೀರ ಗುರುಗಳೇ ಸಾಹಿತ್ಯದಂತೆ,,
👏👏👌👌❤️❤️🌹🌹🙏🙏
ಕಸ್ತೂರಿ ಕನ್ನಡಕ್ಕೆ ಜೀವದುಂಬುವ ಕನ್ನಡದ ಕವಿಗಳಿಗೆ ಶರಣು ಶರಣು,,,,,,.
ಅತ್ಯುತ್ತಮ ಸಾಹಿತ್ಯ ಸಂಗೀತ ಹಾಗೂ ಗಾಯನ.
ನಾನು 5 ತಿಂಗಳಿನಿಂದ ಪ್ರತಿದಿನವೂ ಈ ಹಾಡು ಕೇಳಿದ್ದೇನೆ,ಕೇಳುತ್ತಿದ್ದೇನೆ......ಪ್ರತಿ ಕೇಳುವಿಕೆಯೂ ನವನವೀನ ಭಾವ
ದಿನಕ್ಕೆ 5-8 ಸಲ ನಾದ್ರು ಕೇಳತಾಇರ್ತೀನಿ ತುಂಬಾ ಅದ್ಭುತ ಒಳ್ಳೆ ಸಾರಾಂಶ. ಅರ್ಥ ಗರ್ಭಿತ. ಏನ್ ಹೇಳೋದು ಅಷ್ಟ್ ಸುಂದರವಾಗಿದೆ ನಾವು ಕೂಡ ಈಗೇ ಇರಬೇಕು ಅಲ್ವಾ
🙏😑😑😑🙏 ಬಾಳಿಸು ಗುರುವೇ ಕರುಣೆ ಇಟ್ಟು
ಸಾವಿರ ಶರಣು 🙏🏻🙏🏻🙏🏻🙏🏻🙏🏻🙏🏻 ಕಣ್ಮುಚ್ಚಿ ಕೇಳುತ್ತಿದ್ದರೆ ನಾವೇ ನೀಲಿಯಾಗಸದಲ್ಲೋ ಸಾಗರದಲ್ಲೋ ತೇಲಿದಂತೆ.... ಎಲ್ಲಾ ಭಾವ ಬಂಧನಗಳಿಂದ ಮುಕ್ತವಾದಂತೆ ಭಾಸವಾಗುತ್ತೆ...
Tumba channagede hadu
ಸಾವಿರ ಬಾರಿ ಕೇಳಿದ ಹಾಡು ಇದು ತುಂಬಾ ಇಷ್ಟ.
ಈ ಹಾಡು ಕೇಳಲು ೪: ೦೦ಗಂಟೆ ಎಳುತೇನೆ 🙏 ಎಲ್ಲರಿಗೂ ನಮಸ್ಕಾರ