ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಈಶ ನಿನ್ನ ಚರಣ ಭಜನೆ, ಆಸೆಯಿಂದ ಮಾಡುವೆನು ದೋಷರಾಶಿ ನಾಶಮಾಡು ಶ್ರೀಶ ಕೇಶವ ಈಶ ನಿನ್ನ ಚರಣ ಭಜನೆ, ಆಸೆಯಿಂದ ಮಾಡುವೆನು ದೋಷರಾಶಿ ನಾಶಮಾಡು ಶ್ರೀಶ ಕೇಶವ ||ಶ್ರೀಶ ಕೇಶವ ||ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ, || ನಾರಾಯಣ ||ಶೋಧಿಸೆನ್ನ ಭವದ ಕಲುಶ, ಭೋಧಿಸಯ್ಯ ಜ್ಞಾನವೆನಗೆಬಾಧಿಸುವ ಯಮನ ಬಾಧೆ ಬಿಡಿಸು ಮಾಧವ || ಬಿಡಿಸು ಮಾಧವ ||ಹಿಂದನೇಕ ಯೋನಿಗಳಲಿ, ಬಂದು ಬೆಂದು ನೊಂದೆನಯ್ಯಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || ತಂದೆ ಗೋವಿಂದ ||ಭ್ರಷ್ಟನೆನಿಸಬೇಡ ಕೃಷ್ಣ, ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ |ಬಿಡಿಸು ವಿಷ್ಣುವೇ|ಮದನನಯ್ಯ ನಿನ್ನ ಮಹಿಮೆ, ವದನದಲ್ಲಿ ನುಡಿಯುವಂತೆಹೃದಯದಲ್ಲಿ ಹುದುಗಿಸಯ್ಯ ಮಧುಸೂದನ |ಮಧುಸೂದನ|ಕವಿದುಕೊಂಡು ಇರುವ ಪಾಪ, ಸವೆದು ಪೋಗುವಂತೆ ಮಾಡಿ ಜವನ ಬಾಧೆಯನ್ನು ಬಿಡಿಸೋ ಶ್ರೀತ್ರಿವಿಕ್ರಮ || ಶ್ರೀತ್ರಿವಿಕ್ರಮ || ಕಾಮಜನಕ ನಿನ್ನ ನಾಮ, ಪ್ರೇಮದಿಂದ ಪಾಡುವಂಥನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || ಸ್ವಾಮಿ ವಾಮನ || ಮೊದಲು ನಿನ್ನ ಪಾದಪೂಜೆ, ಒದಗುವಂತೆ ಮಾಡೋ ಎನ್ನಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || ಮುದದಿ ಶ್ರೀಧರ || ಹುಸಿಯನಾಡಿ ಹೊಟ್ಟೆ ಹೊರೆವ, ವಿಷಯದಲ್ಲಿ ರಸಿಕನೆಂದುಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || ಹೃಷೀಕೇಶನೇ || ಬಿದ್ದು ಭವದನೇಕ ಜನುಮ, ಬದ್ದನಾಗಿ ಕಲುಷದಿಂದಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || ಪದ್ಮನಾಭನೆ || ಕಾಮಕ್ರೋಧ ಬಿಡಿಸಿ ನಿನ್ನ, ನಾಮ ಜಿಹ್ವೆಯೊಳಗೆ ನುಡಿಸುಶ್ರೀಮಹಾನುಭಾವನಾದ ದಾಮೋದರ || ದಾಮೋದರ || ಪಂಕಜಾಕ್ಷ ನೀನೆ ಎನ್ನ, ಮಂಕುಬುದ್ಧಿಯನ್ನು ಬಿಡಿಸಿಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || ಸಂಕರ್ಷಣ || ಏಸು ಜನ್ಮ ಬಂದರೇನು, ದಾಸನಲ್ಲವೇನು ನಾನುಘಾಸಿ ಮಾಡದಿರು ಇನ್ನು ವಾಸುದೇವನೇ || ವಾಸುದೇವನೇ || ಬುದ್ಧಿ ಶೂನ್ಯನಾದ ಎನ್ನ, ಬದ್ಧಕಾಯ ಕುಹಕ ಮನವತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || ಪ್ರದ್ಯುಮ್ನನೇ || ಜನನಿ ಜನಕ ನೀನೆಯೆಂದು, ನೆನೆವೆನಯ್ಯ ದೀನಬಂಧುಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || ಅನಿರುದ್ಧನೇ || ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ಕ್ಷೇಮಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || ಪುರುಷೋತ್ತಮ || ಸಾಧುಸಂಗ ಕೊಟ್ಟು ನಿನ್ನ ಪಾದಭಜನೆ ಇತ್ತು ಎನ್ನಭೇದಮಾಡಿ ನೋಡದಿರೊ ಹೇ ಅಧೋಕ್ಷಜ || ಹೇ ಅಧೋಕ್ಷಜ || ಚಾರುಚರಣ ತೋರಿ ಎನಗೆ, ಪಾರುಗಾಣಿಸಯ್ಯ ಕೊನೆಗೆಭಾರ ಹಾಕಿರುವೆ ನಿನಗೆ ನಾರಸಿಂಹನೇ || ನಾರಸಿಂಹನೇ || ಸಂಚಿತಾದಿ ಪಾಪಗಳು ಕಿಂಚಿತಾದ ಪೀಡೆಗಳನುಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || ಸ್ವಾಮಿ ಅಚ್ಯುತ || ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || ಶ್ರೀ ಜನಾರ್ಧನ || ಜಪತಪಾನುಷ್ಠಾನವಿಲ್ಲ ಕುಪಿತಗಾಮಿಯಾದ ಎನ್ನಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || ಹೇ ಉಪೇಂದ್ರನೇ || ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || ಇರಿಸೋ ಶ್ರೀಹರೇ || ಪುಟ್ಟಿಸಲೇಬೇಡ ಇನ್ನು, ಪುಟ್ಟಿಸಿದಕೆ ಪಾಲಿಸಿನ್ನುಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || ಶ್ರೀ ಕೃಷ್ಣನೇ || ಸತ್ಯವಾದ ನಾಮಗಳನು, ನಿತ್ಯದಲ್ಲಿ ಪಠಿಸುವರಿಗೆಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || ಕರ್ತೃ ಕೇಶವ || ಮರೆಯದಲೆ ಹರಿಯ ನಾಮ. ಬರೆದು ಓದಿ ಪೇಳ್ದವರಿಗೆಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || ಆದಿಕೇಶವ ||
Super v nice 👌👌👌
ಈಶ ನಿನ್ನ ಚರಣ ಭಜನೆ, ಆಸೆಯಿಂದ ಮಾಡುವೆನು
ದೋಷರಾಶಿ ನಾಶಮಾಡು ಶ್ರೀಶ ಕೇಶವ
ಈಶ ನಿನ್ನ ಚರಣ ಭಜನೆ, ಆಸೆಯಿಂದ ಮಾಡುವೆನು
ದೋಷರಾಶಿ ನಾಶಮಾಡು ಶ್ರೀಶ ಕೇಶವ ||ಶ್ರೀಶ ಕೇಶವ ||
ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ, || ನಾರಾಯಣ ||
ಶೋಧಿಸೆನ್ನ ಭವದ ಕಲುಶ, ಭೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ || ಬಿಡಿಸು ಮಾಧವ ||
ಹಿಂದನೇಕ ಯೋನಿಗಳಲಿ, ಬಂದು ಬೆಂದು ನೊಂದೆನಯ್ಯ
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || ತಂದೆ ಗೋವಿಂದ ||
ಭ್ರಷ್ಟನೆನಿಸಬೇಡ ಕೃಷ್ಣ, ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ |ಬಿಡಿಸು ವಿಷ್ಣುವೇ|
ಮದನನಯ್ಯ ನಿನ್ನ ಮಹಿಮೆ, ವದನದಲ್ಲಿ ನುಡಿಯುವಂತೆ
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ |ಮಧುಸೂದನ|
ಕವಿದುಕೊಂಡು ಇರುವ ಪಾಪ, ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೋ ಶ್ರೀತ್ರಿವಿಕ್ರಮ || ಶ್ರೀತ್ರಿವಿಕ್ರಮ ||
ಕಾಮಜನಕ ನಿನ್ನ ನಾಮ, ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || ಸ್ವಾಮಿ ವಾಮನ ||
ಮೊದಲು ನಿನ್ನ ಪಾದಪೂಜೆ, ಒದಗುವಂತೆ ಮಾಡೋ ಎನ್ನ
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || ಮುದದಿ ಶ್ರೀಧರ ||
ಹುಸಿಯನಾಡಿ ಹೊಟ್ಟೆ ಹೊರೆವ, ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || ಹೃಷೀಕೇಶನೇ ||
ಬಿದ್ದು ಭವದನೇಕ ಜನುಮ, ಬದ್ದನಾಗಿ ಕಲುಷದಿಂದ
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || ಪದ್ಮನಾಭನೆ ||
ಕಾಮಕ್ರೋಧ ಬಿಡಿಸಿ ನಿನ್ನ, ನಾಮ ಜಿಹ್ವೆಯೊಳಗೆ ನುಡಿಸು
ಶ್ರೀಮಹಾನುಭಾವನಾದ ದಾಮೋದರ || ದಾಮೋದರ ||
ಪಂಕಜಾಕ್ಷ ನೀನೆ ಎನ್ನ, ಮಂಕುಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || ಸಂಕರ್ಷಣ ||
ಏಸು ಜನ್ಮ ಬಂದರೇನು, ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು ವಾಸುದೇವನೇ || ವಾಸುದೇವನೇ ||
ಬುದ್ಧಿ ಶೂನ್ಯನಾದ ಎನ್ನ, ಬದ್ಧಕಾಯ ಕುಹಕ ಮನವ
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || ಪ್ರದ್ಯುಮ್ನನೇ ||
ಜನನಿ ಜನಕ ನೀನೆಯೆಂದು, ನೆನೆವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || ಅನಿರುದ್ಧನೇ ||
ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ಕ್ಷೇಮ
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || ಪುರುಷೋತ್ತಮ ||
ಸಾಧುಸಂಗ ಕೊಟ್ಟು ನಿನ್ನ ಪಾದಭಜನೆ ಇತ್ತು ಎನ್ನ
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || ಹೇ ಅಧೋಕ್ಷಜ ||
ಚಾರುಚರಣ ತೋರಿ ಎನಗೆ, ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ ನಾರಸಿಂಹನೇ || ನಾರಸಿಂಹನೇ ||
ಸಂಚಿತಾದಿ ಪಾಪಗಳು ಕಿಂಚಿತಾದ ಪೀಡೆಗಳನು
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || ಸ್ವಾಮಿ ಅಚ್ಯುತ ||
ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || ಶ್ರೀ ಜನಾರ್ಧನ ||
ಜಪತಪಾನುಷ್ಠಾನವಿಲ್ಲ ಕುಪಿತಗಾಮಿಯಾದ ಎನ್ನ
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || ಹೇ ಉಪೇಂದ್ರನೇ ||
ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || ಇರಿಸೋ ಶ್ರೀಹರೇ ||
ಪುಟ್ಟಿಸಲೇಬೇಡ ಇನ್ನು, ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || ಶ್ರೀ ಕೃಷ್ಣನೇ ||
ಸತ್ಯವಾದ ನಾಮಗಳನು, ನಿತ್ಯದಲ್ಲಿ ಪಠಿಸುವರಿಗೆ
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || ಕರ್ತೃ ಕೇಶವ ||
ಮರೆಯದಲೆ ಹರಿಯ ನಾಮ. ಬರೆದು ಓದಿ ಪೇಳ್ದವರಿಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || ಆದಿಕೇಶವ ||
Super v nice 👌👌👌