Eesha Ninna Charana Bhajane Karaoke | Kanaka Dasa's Keshava Nama | Bhajan for Inner Peace

แชร์
ฝัง
  • เผยแพร่เมื่อ 21 ต.ค. 2024

ความคิดเห็น • 2

  • @kummis641
    @kummis641  3 หลายเดือนก่อน +3

    ಈಶ ನಿನ್ನ ಚರಣ ಭಜನೆ, ಆಸೆಯಿಂದ ಮಾಡುವೆನು
    ದೋಷರಾಶಿ ನಾಶಮಾಡು ಶ್ರೀಶ ಕೇಶವ
    ಈಶ ನಿನ್ನ ಚರಣ ಭಜನೆ, ಆಸೆಯಿಂದ ಮಾಡುವೆನು
    ದೋಷರಾಶಿ ನಾಶಮಾಡು ಶ್ರೀಶ ಕೇಶವ ||ಶ್ರೀಶ ಕೇಶವ ||
    ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
    ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ, || ನಾರಾಯಣ ||
    ಶೋಧಿಸೆನ್ನ ಭವದ ಕಲುಶ, ಭೋಧಿಸಯ್ಯ ಜ್ಞಾನವೆನಗೆ
    ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ || ಬಿಡಿಸು ಮಾಧವ ||
    ಹಿಂದನೇಕ ಯೋನಿಗಳಲಿ, ಬಂದು ಬೆಂದು ನೊಂದೆನಯ್ಯ
    ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || ತಂದೆ ಗೋವಿಂದ ||
    ಭ್ರಷ್ಟನೆನಿಸಬೇಡ ಕೃಷ್ಣ, ಇಷ್ಟು ಮಾತ್ರ ಬೇಡಿಕೊಂಬೆ
    ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ |ಬಿಡಿಸು ವಿಷ್ಣುವೇ|
    ಮದನನಯ್ಯ ನಿನ್ನ ಮಹಿಮೆ, ವದನದಲ್ಲಿ ನುಡಿಯುವಂತೆ
    ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ |ಮಧುಸೂದನ|
    ಕವಿದುಕೊಂಡು ಇರುವ ಪಾಪ, ಸವೆದು ಪೋಗುವಂತೆ ಮಾಡಿ
    ಜವನ ಬಾಧೆಯನ್ನು ಬಿಡಿಸೋ ಶ್ರೀತ್ರಿವಿಕ್ರಮ || ಶ್ರೀತ್ರಿವಿಕ್ರಮ ||
    ಕಾಮಜನಕ ನಿನ್ನ ನಾಮ, ಪ್ರೇಮದಿಂದ ಪಾಡುವಂಥ
    ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || ಸ್ವಾಮಿ ವಾಮನ ||
    ಮೊದಲು ನಿನ್ನ ಪಾದಪೂಜೆ, ಒದಗುವಂತೆ ಮಾಡೋ ಎನ್ನ
    ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || ಮುದದಿ ಶ್ರೀಧರ ||
    ಹುಸಿಯನಾಡಿ ಹೊಟ್ಟೆ ಹೊರೆವ, ವಿಷಯದಲ್ಲಿ ರಸಿಕನೆಂದು
    ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || ಹೃಷೀಕೇಶನೇ ||
    ಬಿದ್ದು ಭವದನೇಕ ಜನುಮ, ಬದ್ದನಾಗಿ ಕಲುಷದಿಂದ
    ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || ಪದ್ಮನಾಭನೆ ||
    ಕಾಮಕ್ರೋಧ ಬಿಡಿಸಿ ನಿನ್ನ, ನಾಮ ಜಿಹ್ವೆಯೊಳಗೆ ನುಡಿಸು
    ಶ್ರೀಮಹಾನುಭಾವನಾದ ದಾಮೋದರ || ದಾಮೋದರ ||
    ಪಂಕಜಾಕ್ಷ ನೀನೆ ಎನ್ನ, ಮಂಕುಬುದ್ಧಿಯನ್ನು ಬಿಡಿಸಿ
    ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || ಸಂಕರ್ಷಣ ||
    ಏಸು ಜನ್ಮ ಬಂದರೇನು, ದಾಸನಲ್ಲವೇನು ನಾನು
    ಘಾಸಿ ಮಾಡದಿರು ಇನ್ನು ವಾಸುದೇವನೇ || ವಾಸುದೇವನೇ ||
    ಬುದ್ಧಿ ಶೂನ್ಯನಾದ ಎನ್ನ, ಬದ್ಧಕಾಯ ಕುಹಕ ಮನವ
    ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || ಪ್ರದ್ಯುಮ್ನನೇ ||
    ಜನನಿ ಜನಕ ನೀನೆಯೆಂದು, ನೆನೆವೆನಯ್ಯ ದೀನಬಂಧು
    ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || ಅನಿರುದ್ಧನೇ ||
    ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ಕ್ಷೇಮ
    ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || ಪುರುಷೋತ್ತಮ ||
    ಸಾಧುಸಂಗ ಕೊಟ್ಟು ನಿನ್ನ ಪಾದಭಜನೆ ಇತ್ತು ಎನ್ನ
    ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || ಹೇ ಅಧೋಕ್ಷಜ ||
    ಚಾರುಚರಣ ತೋರಿ ಎನಗೆ, ಪಾರುಗಾಣಿಸಯ್ಯ ಕೊನೆಗೆ
    ಭಾರ ಹಾಕಿರುವೆ ನಿನಗೆ ನಾರಸಿಂಹನೇ || ನಾರಸಿಂಹನೇ ||
    ಸಂಚಿತಾದಿ ಪಾಪಗಳು ಕಿಂಚಿತಾದ ಪೀಡೆಗಳನು
    ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || ಸ್ವಾಮಿ ಅಚ್ಯುತ ||
    ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ
    ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || ಶ್ರೀ ಜನಾರ್ಧನ ||
    ಜಪತಪಾನುಷ್ಠಾನವಿಲ್ಲ ಕುಪಿತಗಾಮಿಯಾದ ಎನ್ನ
    ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || ಹೇ ಉಪೇಂದ್ರನೇ ||
    ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ
    ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || ಇರಿಸೋ ಶ್ರೀಹರೇ ||
    ಪುಟ್ಟಿಸಲೇಬೇಡ ಇನ್ನು, ಪುಟ್ಟಿಸಿದಕೆ ಪಾಲಿಸಿನ್ನು
    ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || ಶ್ರೀ ಕೃಷ್ಣನೇ ||
    ಸತ್ಯವಾದ ನಾಮಗಳನು, ನಿತ್ಯದಲ್ಲಿ ಪಠಿಸುವರಿಗೆ
    ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || ಕರ್ತೃ ಕೇಶವ ||
    ಮರೆಯದಲೆ ಹರಿಯ ನಾಮ. ಬರೆದು ಓದಿ ಪೇಳ್ದವರಿಗೆ
    ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ
    ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || ಆದಿಕೇಶವ ||

  • @RhythmBite417
    @RhythmBite417 3 หลายเดือนก่อน +2

    Super v nice 👌👌👌