Hubballi-Ankola Railway Project: ಅಂಕೋಲಾ ರೈಲ್ವೇ ಯೋಜನೆ ಅನುಷ್ಠಾನವಾಗಲೇಬೇಕು! | Vijay Karnataka
ฝัง
- เผยแพร่เมื่อ 21 ก.ย. 2024
- ಹುಬ್ಬಳ್ಳಿ - ಅಂಕೋಲಾ ರೈಲ್ವೇ ಯೋಜನೆ ಅನುಷ್ಠಾನವಾಗಲೇಬೇಕು. ಸೀಬರ್ಡ್, ಕೈಗಾ, ಕಾಳಿ ಯೋಜನೆಗಳಿಗೆ ಸಹಕಾರ ನೀಡಿ, ಉತ್ತರ ಕನ್ನಡದ ಜನತೆ ತಮ್ಮ ವಾಸ ಸ್ಥಳಗಳೊಂದಿಗೆ, ಅರಣ್ಯಭೂಮಿಗಳನ್ನ ಕಳೆದುಕೊಂಡಿದ್ದೇವೆ. ಇದೀಗ ಉತ್ತರ ಕರ್ನಾಟಕ- ಉತ್ತರ ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ರೈಲ್ವೇ ಯೋಜನೆಗೆ ಎಲ್ಲರೂ ಪಕ್ಷಾತೀತವಾಗಿ ಒಂದಾಗಬೇಕಿದೆ ಎಂದು ಮಾಜಿ ಸಚಿವ, ಹಾಲಿ ಹಳಿಯಾಳ ಶಾಸಕ ಆರ್ವಿ ದೇಶಪಾಂಡೆ ಹೇಳಿದರು.
ಶಿರಸಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಮಾತ್ರವಲ್ಲ, ಪೂರ್ಣ ಉತ್ತರ ಕರ್ನಾಟಕಕ್ಕೆ ಲಾಭವಾಗಲಿದೆ. ಉತ್ತರ ಕರ್ನಾಟಕ ಕೂಡ ಬಹಳ ಹಿಂದುಳಿದಿದ್ದು, ರೈಲ್ವೆ ಯೋಜನೆ ಅನುಷ್ಠಾನಗೊಂಡರೆ ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಬೆಳೆಯಲು ಸಾಕಷ್ಟು ಅವಕಾಶವಿದೆ ಎಂದರು.
ಹಾಗಂತ ಪರಿಸರ ಸಂರಕ್ಷಣೆಯೂ ಆಗಬೇಕು, ಆಗಬಾರದು ಎನ್ನುವ ಜನತೆ ನಾವಲ್ಲ. ಉತ್ತರ ಕನ್ನಡ ಜಿಲ್ಲೆಯ ಜನ ಪರಿಸರ ಉಳಿಸಿದ್ದಾರೆ. ಹುಬ್ಬಳ್ಳಿಯಿಂದ ಕಲಘಟಕಿಯವರೆಗಿನ ಈ ರೈಲ್ವೇ ಯೋಜನೆಯ ಪ್ರಾಥಮಿಕ ಹಂತ ಮುಗಿದಿದೆ. ರೈಲ್ವೇ ಆಗದಿದ್ದರೆ ಹೆಚ್ಚು ವಾಹನಗಳು ಓಡಾಡುವ ಹುಬ್ಬಳ್ಳಿ- ಅಂಕೋಲಾ- ಕಾರವಾರ ಹೆದ್ದಾರಿ ವಿಸ್ತರಣೆ ಮಾಡಬೇಕಾಗುತ್ತದೆ. ಈ ವೇಳೆ ಪರಿಸರಕ್ಕೆ ಇನ್ನೂ ಹೆಚ್ಚು ಹಾನಿಯಾಗಲಿದೆ. ರೈಲ್ವೆ ಯೋಜನೆ ವಿಳಂಬವಾಗಿ ಈಗಾಗಲೇ ಬಹಳ ಹಾನಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರೈಲ್ವೆ ಯೋಜನೆ ಅನುಷ್ಠಾನಕ್ಕೆ ಎಲ್ಲರ ಸಹಕಾರ ಬೇಕು. ಈಗಾಗಲೇ ಹೈಕೋರ್ಟ್ ಕಮಿಟಿಯೊಂದನ್ನು ನೇಮಿಸಿದ್ದು, ಯೋಜನೆಯಿಂದ ಎಷ್ಟು ದುಷ್ಪರಿಣಾಮ ಆಗಲಿದೆ ಹಾಗೂ ಇತರ ಸಾಧ್ಯತೆಗಳ ಬಗ್ಗೆ ವರದಿ ನೀಡಲು ಸೂಚಿಸಿದೆ. ಅದರಂತೆ ನಿನ್ನೆಯಿಂದ ಈ ಕಮಿಟಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದೆ. ರೈಲ್ವೆ ಮತ್ತು ಪರಿಸರ ಸಚಿವರಿಗೆ ಈಗಾಗಲೇ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಪತ್ರ ಬರೆದು ಒತ್ತಾಯಿಸಿದ್ದೇನೆ ಎಂದು ದೇಶಪಾಂಡೆ ತಿಳಿಸಿದರು.
#rvdeshpande #railway #railwayproject
Our Website : Vijaykarnataka...
Facebook: / vijaykarnataka
Twitter: / vijaykarnataka
Hubli Ankola Railway Line Aaglebeku. All Politicians Support Madi.
Hubli Ankola railway agalebeku
Hubli Ankola Railway ,(ಆಗ್ಲೇ ಬೇಕು) sir please
Yes this railway project must be completed some land owners are trying to stall it they do not want to give their land to this project they are using environment as a cause to delay it very bad
Ninu yenu madide estu varsha 8sala mla madi aytu navella ninge
😝