Ep-6|ಬೆಂಗಳೂರಾ..? ಬೆಂದಕಾಳೂರಾ..? ಬೆಂಗಳೂರಿನ ನಿಜವಾದ ಹೆಸರೇನು..?|Bengaluru|Kempe Gowda I|GaurishAkkiStudio

แชร์
ฝัง
  • เผยแพร่เมื่อ 21 ส.ค. 2024
  • ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆಯಲ್ಲಿ ಕೆಂಪೇಗೌಡರ ಬಗ್ಗೆ ವಿದ್ವತ್ಪೂರ್ಣ ಸಂಶೋಧನಾ ಗ್ರಂಥ ರಚನೆ ಮಾಡಿರುವ ಇತಿಹಾಸ ತಜ್ಞರಾದ ಡಾ.ತಲಕಾಡು ಚಿಕ್ಕ ರಂಗೇಗೌಡರು ಗೌರೀಶ್ ಅಕ್ಕಿ ಸ್ಟುಡಿಯೋಗೆ ಆಗಮಿಸಿದ್ದರು. ಪ್ರಮುಖವಾಗಿ ಕೆಂಪೇಗೌಡರನ್ನು ಕುರಿತ ಸಂವಾದ ಇದಾಗಿತ್ತು.
    ಕೆಂಪೇಗೌಡರ ಹುಟ್ಟು, ಇತಿಹಾಸ, ಬೆಂಗಳೂರಿನ ಸ್ಥಾಪನೆ ಜೊತೆಜೊತೆಗೆ ಅವರನ್ನು ಕುರಿತ ತಪ್ಪು ತಿಳಿವಳಿಕೆಯನ್ನು ತೊಡೆದು ಹಾಕುವ ಪ್ರಯತ್ನ ಈ ಸಂವಾದದಲ್ಲಿದೆ. ತಪ್ಪದೇ ವೀಕ್ಷಿಸಿ..
    ಇವರು ಸಂಪಾದಿಸಿರುವ ಪುರಾಣೈತಿಹಾಸಿಕ ಸಂಶೋಧನಾ ಕೃತಿ -ʼಶ್ರೀ ಕೆಂಪೇಗೌಡ ರಾಜವಂಶ ಚರಿತೆʼ ಪುಸ್ತಕ ಖರೀದಿಸಲು ಕರೆ ಮಾಡಿ : 98450 56075. ಈ ಕೃತಿ ಅಂಕಿತ ಪುಸ್ತಕ, ನವ ಕರ್ನಾಟಕ, ಸಪ್ನಾ ಬುಕ್‌ ಹೌಸ್‌ ಮುಂತಾದ ಮಳಿಗೆಗಳಲ್ಲಿ ಲಭ್ಯವಿದೆ.
    ===================
    ಡಾ. ತಲಕಾಡು ಚಿಕ್ಕರಂಗೇಗೌಡ ಎಂ. ಎ., ಡಿ'ಲಿಟ್.,
    ಡಾ. ತಲಕಾಡು ಚಿಕ್ಕರಂಗೇಗೌಡರು ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲೂಕಿನ ತಲಕಾಡು ಗ್ರಾಮದಲ್ಲಿ ದಾನಿ ಜಮೀನ್ದಾರ್ ಚಾವಡಿ ರಂಗೇಗೌಡರ ಮನೆತನದಲ್ಲಿ ದಿನಾಂಕ 05.02.1962ರಲ್ಲಿ ಹುಟ್ಟಿದರು. ಇವರ ತಂದೆ ದಿ.ಗಿರಿಗೌಡರು ಹಾಗೂ ತಾಯಿ ದಿ. ಚಂದ್ರಮ್ಮ ಅಪ್ಪಟ ರೈತ ದಂಪತಿಗಳು. ಮಗನ ವಿದ್ಯಾಭ್ಯಾಸದ ಸಲುವಾಗಿಯೇ ಈ ದಂಪತಿಗಳು ತಮ್ಮ ವಾಸ್ತವ್ಯವನ್ನು ತಲಕಾಡು ಗ್ರಾಮದಿಂದ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಮಹಾನಗರಕ್ಕೆ ಬದಲಾಯಿಸಿದರು. ಇದರ ಪರಿಣಾಮವಾಗಿ ಡಾ.ತಲಕಾಡು ಚಿಕ್ಕರಂಗೇಗೌಡರು ಬೆಂಗಳೂರಿನ ಮಲ್ಲೇಶ್ವರದ ಶ್ರೀ ಸರಸ್ವತಿ ಮಹಿಳಾ ಸಮಾಜ, ಶೇಷಾದ್ರಿಪುರ ಪ್ರೌಢಶಾಲೆ ಮತ್ತು ಎಂ.ಇ.ಎಸ್. ಕಾಲೇಜುಗಳಲ್ಲಿ ತಮ್ಮ ಶಾಲಾ ಕಾಲೇಜು ಶಿಕ್ಷಣಗಳನ್ನು ಪೂರೈಸಿದರು. ಇದರ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ತದನಂತರ 'ತಲಕಾಡು : ಸಾಂಸ್ಕೃತಿಕ ಅಧ್ಯಯನ' ಎಂಬ ವಿಷಯದ ಮೇಲೆ ಆಳವಾದ ಸಂಶೋಧನೆ ನಡೆಸಿ ಪ್ರೌಢ ಪ್ರಬಂಧವನ್ನು ರಚಿಸಿ ಅದನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇಲ್ಲಿಗೆ ಸಲ್ಲಿಸಿ 'ಡಾಕ್ಟರ್ ಆಫ್ ಲೈಟರೇಚರ್' ಪದವಿಯನ್ನು ಪಡೆದರು.
    ಯುವಕರಾಗಿದ್ದಾಗಲೇ ಇಡೀ ದೇಶವನ್ನು ಸುತ್ತಬೇಕೆಂದು ಇಚ್ಛೆ ಪಟ್ಟು ಅದರಂತೆ 1980 ರಲ್ಲಿ ಸೈಕಲ್ನಲ್ಲಿ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಪ್ರವಾಸ ಮಾಡಿ ಬಂದರು.ನಂತರ 1981ರಲ್ಲಿ ಹಿಮಾಲಯ ಪರ್ವತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಬಂದರು. ಇದಕ್ಕಾಗಿ ಇವರಿಗೆ 1992ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. 2018 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇವರಿಗೆ 'ನಾಡಪ್ರಭು ಕೆಂಪೇಗೌಡ ಪ್ರಶಸ್ತಿ' ನೀಡಿ ಗೌರವಿಸಿದೆ.
    ತಮ್ಮ ವಿದ್ಯಾಭ್ಯಾಸದ ನಂತರ ಆಂತರಿಕ ಲೆಕ್ಕ ಪರಿಶೋಧಕರಾಗಿ ವೃತ್ತಿಯನ್ನು ಆರಂಭಿಸಿದ ಇವರು ಬೆಂಗಳೂರು, ಭೂಪಾಲ್, ನವದೆಹಲಿ, ನಾಗಪುರ, ಬಾಂಬೆ, ಸಿಕಂದರಾಬಾದ್, ಮದ್ರಾಸ್, ಹಿಂದೂಪುರ, ಅನಂತಪುರ, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ಹಾಸನ, ಮಡಿಕೇರಿ ಮತ್ತು ಮೈಸೂರುಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿ ಲೋಕಜ್ಞಾನವನ್ನು ಪಡೆದರು.
    ಚೆಲುವ ಕನ್ನಡನಾಡು, ಮಣ್ಣಿನ ಮಕ್ಕಳು ಮಾಸ ಪತ್ರಿಕೆಯ ಸಂಪಾದಕರಾಗಿಯೂ, ಈ ಸಂಜೆ ಪತ್ರಿಕೆಯ ವಿಶೇಷ ಬಾತ್ಮಿದಾರರಾಗಿಯೂ ಮತ್ತು 'ಸೂರ್ಯೋದಯ' ಕನ್ನಡ ದಿನಪತ್ರಿಕೆಯ ಆಡಳಿತಾಧಿಕಾರಿಯಾಗಿಯೂ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿರುವ ಇವರು ಕನ್ನಡಿಗರೇ ಒಂದಾಗಿ, ದಲಿತರ ಪ್ರಥಮ ವಿದ್ಯಾಗುರು ತಲಕಾಡು ರಂಗೇಗೌಡರು, ಟಿಪ್ಪು ಸುಲ್ತಾನ್ ಕಾಲದ ಪ್ರಸಂಗಗಳು, ವಿಜಯನಗರ ಸಾಮ್ರಾಜ್ಯದ ಅಮರ ನಾಯಕ ಶ್ರೀಮತು ರಾಜಮಾನ್ಯ ಶ್ರೀ ಕೆಂಪೇಗೌಡ ರಾಜವಂಶ ಚರಿತೆ ಎಂಬ ಕೃತಿಗಳನ್ನು ರಚಿಸಿದ್ದಾರೆ.
    ಕರ್ನಾಟಕ ರಾಜ್ಯ ಸರ್ಕಾರ ರಚಿಸಿರುವ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾಗಿ ಹಾಗೂ ಇತಿಹಾಸಿಕ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಧಿಕಾರವು ಸ್ಥಾಪಿಸಿರುವ ಪೀಠವೂ ಸೇರಿದಂತೆ 108 ಅಡಿಗಳ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯವಾದ ಕಂಚಿನ ಪ್ರತಿಮೆ ರೂಪುರೇಷೆ ನಿರ್ಧಾರ ಮಾಡುವಲ್ಲಿ ಅಂದರೆ ನಾಡಪ್ರಭು ಕೆಂಪೇಗೌಡರ ದೇಹದಾರ್ಡ್ಯತೆ, ಮುಖಚರ್ಯೆ ಹೇಗಿರಬೇಕೆಂಬ ಬಗ್ಗೆ ಸಲಹೆ ಸೂಚನೆ ನೀಡಿ ಅದು ಭವ್ಯವಾಗಿ ರೂಪುಗೊಳ್ಳುವಂತೆ ಪಾತ್ರ ವಹಿಸಿದ್ದಾರೆ. ಜೊತೆಗೆ ನಾಡಪ್ರಭುಗಳ ಬೃಹತ್ ಕಂಚಿನ ಪ್ರತಿಮೆಯ ಪೀಠದ ಸುತ್ತ ಇರುವ 18 ಅಡಿಗಳ ನಾಲ್ಕು ಭಿತ್ತಿಚಿತ್ರಗಳಾದ ನಾಡಪ್ರಭು ಕೆಂಪೇಗೌಡರು ಒಡ್ಡೋಲಗದಲ್ಲಿ ಆಸೀನರಾಗಿ ಕೆರೆ ನಿರ್ಮಾಣದ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿರುವ ದೃಶ್ಯ, ನಾಡಪ್ರಭು ಕೆಂಪೇಗೌಡರು ಕುಟುಂಬ ಸಮೇತರಾಗಿ ಆದಿ ಚುಂಚನಗಿರಿಯ ಶ್ರೀ ಕಾಲಭೈರವನ ಪೂಜೆಯಲ್ಲಿ ಪಾಲ್ಗೊಂಡಿರುವ ದೃಶ್ಯ, ನಾಡಪ್ರಭು ಕೆಂಪೇಗೌಡರಿಂದ ಬೆಂಗಳೂರು ಪೇಟೆಗಳ ವೀಕ್ಷಣೆಯ ದೃಶ್ಯ ಹಾಗೂ ಅಮರನಾಯಕ ನಾಡಪ್ರಭು ಕೆಂಪೇಗೌಡರು ನಿರ್ಮಾಣ ಹಂತದಲ್ಲಿರುವ ಬೆಂಗಳೂರು ಕೋಟೆಯನ್ನು ವೀಕ್ಷಿಸುತ್ತಿರುವ ದೃಶ್ಯಗಳನ್ನು ಆಳವಾಗಿ ಅಧ್ಯಯನ
    ಮಾಡಿ ನೀಡಿದ ಶ್ರೇಯಸ್ಸು ಇವರದು. ಈ ಭವ್ಯವಾದ ಪ್ರತಿಮೆಯು London books of world record ಪ್ರಕಾರ ನಗರವೊಂದರ ನಿರ್ಮಾತೃವೊಬ್ಬರ 108 ಅಡಿಗಳ ಎತ್ತರದ ಲೋಹದ ಪ್ರತಿಮೆಯೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿತವಾಗಿರುವುದು ಪ್ರಪಂಚದಲ್ಲಿ ಇದೆ ಮೊದಲು ಎಂದು ದಾಖಲಾಗಿದೆ.
    ===================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    #nadaprabhukempegowda #birthanniversary #gaurishakkistudio #talakaduchikkarangegowda #historian #history #kempegowda #kempegowdastatue
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 26

  • @chandrakaland2973
    @chandrakaland2973 ปีที่แล้ว

    Kempegowdara samagra maahithige thumbu hrudhayada danyavaadagalu.

  • @BasavarajappaBasappa-in5sv
    @BasavarajappaBasappa-in5sv ปีที่แล้ว +8

    ಕೆಂಪೇಗೌಡರ ಬಗ್ಗೆ ಸನ್ಮಾನ್ಯ ತಲಕಾಡು ಚಿಕ್ಕರಂಗೇಗೌಡರು ಸ್ವತಃ ಅಧ್ಯಯನ ಮತ್ತು ಸ್ಥಳ ವೀಕ್ಷಣೆ ಮಾಡಿ ಬರೆದಿರುವ ಕೃತಿ ಓದಲು ಉತ್ಸುಕನಾಗಿದ್ದೆೇನೆ ಸಂವಾದ ಚನ್ನಾಗಿ ಮೂಡಿ ಬಂದಿದೆ ವಂದನೆಗಳು.

  • @lokeshgowda9797
    @lokeshgowda9797 ปีที่แล้ว

    ಧನ್ಯವಾದಗಳು 🙏
    ತಲಕಾಡು ಗಂಗರು ಮತ್ತು ಇಮ್ಮಡಿ ಪುಲಿಕೇಶಿಯ ಬಗ್ಗೆ ಗೌಡರೊಂದಿಗೆ ಸಂವಾದ ಮಾಡಿ.
    ಅದು ಸಮೃದ್ಧಿಯಾದ ಇತಿಹಾಸ.

  • @PRAJNATV108
    @PRAJNATV108 ปีที่แล้ว

    As per the begur manument bengavaluru is the cottect wotd👌👍🙏🙏

  • @MohanKumar-pv4zu
    @MohanKumar-pv4zu ปีที่แล้ว

    Gaurish sir, big applause to you and the SME Mr Chikka range Gowda sir, we are really very proud and very very informative abt Legend Sri Kempegowda. I would request from my bottom of my heart if you could help these kind of SME ( Subject matter expert) who can educate us on all kannada kings history, be it Chalukyas, Hoysalas, Vijayanagar and all other kings. It's a sincere request. The fourth episode gave me goose bumps and prompted to name my next generation kids with " Kempegowda" name, I hope listening to all other empires and kings the city and kids should be named after them.

  • @manjunathan4680
    @manjunathan4680 ปีที่แล้ว

    ತಲಕಾಡು ಗಂಗಗರು ಬಗ್ಗೆ. ಇಮ್ಮಡಿ ಪುಳಿಕೇಶಿ ಬಗ್ಗೆ.
    ಮಾಹಿತಿ ಪಡಿಯಿರಿ.

  • @RameshKumar-tj9uj
    @RameshKumar-tj9uj ปีที่แล้ว +2

    ನಮ್ಮ ಒಕ್ಕಲಿಗರ ಕುಲಾತಿಲಕ ನಮ್ಮ ತಲಕಾಡು ಚಿಕ್ಕ Rangegowdru

  • @seenakrishnappa2423
    @seenakrishnappa2423 ปีที่แล้ว +1

    Thank you Mr. Gourish Akki for this wonderful presentation.
    🙏🏼 Mr. Chukherange Gowdare, very informative thank you very much for your contribution.

  • @gayathridevi5593
    @gayathridevi5593 ปีที่แล้ว

    V didnt know so many information abt bengaluru n kempegowdara ithihasa. Danyavadhagalu sir🙏🙏

  • @manjunatha13675
    @manjunatha13675 ปีที่แล้ว +1

    Thank you very much sir this six sessions of yours related to Bangalore and kempegowda was very very much educational and informative ❤

  • @Hombeesilu
    @Hombeesilu ปีที่แล้ว +1

    💛❤️🙏

  • @mamathack9859
    @mamathack9859 ปีที่แล้ว

    Thanks Gowrish Akki sir

  • @manju-uu6yc
    @manju-uu6yc ปีที่แล้ว

    Thanks gaurish & gowdre

  • @Gopalkrishna-gd4ws
    @Gopalkrishna-gd4ws ปีที่แล้ว

    Very informative

  • @dayaanand2999
    @dayaanand2999 ปีที่แล้ว

    Super sir 🎉

  • @thedon207
    @thedon207 ปีที่แล้ว

    Superb gowdre

  • @RameshKumar-tj9uj
    @RameshKumar-tj9uj ปีที่แล้ว

    ❤❤❤🙏🙏🙏🙏🙏🙏👍👍👍👍👍

  • @kshetriyaa
    @kshetriyaa ปีที่แล้ว

    ಉರಿ, ನಂಜೆ ಗೌಡ ಬಗ್ಗೆ ಕೇಳಿ

  • @rangnathranganath9541
    @rangnathranganath9541 ปีที่แล้ว

    ಇ ತಿ ಹಾ ಸ ವ ನ್ನು ಬ ಲ್ಲ ವ ರಿ o ದ ಇ ತಿ ಹಾ ಸ ವ ನ್ನು ತಿ ಳಿ ಯ ಬ ಹು ದೇ
    ವಿ ನ ಹ ಅ ರೇ ಬ ರೇ ತಿ ಳಿ ದ ಹೊ ಟ್ಟೆ ಪಾ ಡಿ ನ ಅ ಜ್ಞಾ ನಿ ಗ ಳಿ o ದ ಲ್ಲ.
    ತ ಲ ಕಾ ಡು ಚಿಕ್ ರ o ಗೆ ಗೌ ಡ ರಿ ಗೆ ವಿ ನ ಮ್ರ ವ o ದ ನೇ ಗ ಳು.

  • @murulidharagowda8554
    @murulidharagowda8554 ปีที่แล้ว +1

    Dandianshivaa

  • @ravirajeurs6400
    @ravirajeurs6400 ปีที่แล้ว

    ನಮ್ಮ ತಲಾಕಾಡಿನ ಹೆಮ್ಮೆಯ ಮಗ

  • @Iamindian633
    @Iamindian633 ปีที่แล้ว

    Namma uru kudu Hulikallu samipadde nanu ondu dina nam appana nam vamsha rukshda bagge keldaga hige helidru namma mula purusha ಮೈಸೂರು inda Narajanakuppe antha allige bandi serkondidru avrinda illa namma samudya namma vamsha belithu antha Magadiya Rangantha namma kuladevaru