ನಿತ್ಯಾರಾಮ್ ನಟನೆಯ ಶಾಂತಿನಿವಾಸ ಧಾರವಾಹಿ|udaya tvserials| shanthi nivasa

แชร์
ฝัง
  • เผยแพร่เมื่อ 6 ก.ย. 2024
  • ನಿತ್ಯಾರಾಮ್ ನಟನೆಯ ಶಾಂತಿನಿವಾಸ
    ಒಂದಷ್ಟು ಚಿತ್ರಗಳಲ್ಲಿ ನಟಿಸಿ ಬಣ್ಣದಲೋಕದಿಂದ ದೂರ ಇದ್ದ ನಿತ್ಯಾರಾಮ್ ಗ್ಯಾಪ್ ನಂತರ ’ಶಾಂತಿನಿವಾಸ’ ಧಾರವಾಹಿಯ ಮೂಲಕ ಮತ್ತೆ ಅಭಿನಯರಂಗಕ್ಕೆ ಪ್ರವೇಶ ಮಾಡಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಕೌಟಂಬಿಕ ಕಥೆಯನ್ನು ಹೊಂದಿದೆ. ಶಾಂತಿ ನಿವಾಸದ ಮುದ್ದಿನ ಸೊಸೆಯಾಗಿ ಎಲ್ಲರಿಗೂ ಪ್ರೀತಿ ಪಾತ್ರಳು. ಅವಿದ್ಯಾವಂತಳು, ಆದರೆ ಅತಿಥಿ ಸತ್ಕಾರದಲ್ಲಿ ಪದವೀದರೆ. ಮಲತಾಯಿ ಮಮತಾಳನ್ನು ಮರೆಯದ ಮಮತಾಮಯಿ. ಮನೆಯ ಹೊರಗೂ ಒಳಗೂ ದಣಿವರೆಯದೆ ದುಡಿಯುವ ಗೃಹಿಣಿಯರ ಮೊದಲ ಸಾಲಿನಲ್ಲಿ ನಿಲ್ಲುವ ಅಜಾತಶತ್ರು. ಇಂತಹವರಿಗೂ ಶತ್ರುಗಳು ಇರುತ್ತಾರೆ. ಅವಳೇ ಮಂಥರ.
    ಜೈಲಿನಲ್ಲಿ ಇದ್ದಷ್ಟು ದಿನವೂ ಶಾಂತಳ ಮೇಲೆ ಸೇಡು ತೀರಿಸಿಕೊಳ್ಳುವ ಹಠ. ಶಿಕ್ಷೆ ಮುಗಿಸಿ ಹೊರಬಂದ ಮೇಲೆ ಚಾಲಾಕಿತನದಿಂದ ನಿವಾಸಕ್ಕೆ ಎಂಟ್ರಿ ಕೊಡುತ್ತಾಳೆ. ಹಾಗಾದರೆ ಈಕೆಯ ಮುಂದಿನ ಯೋಜನೆ ಏನು? ನಿಷ್ಕಲ್ಮಶವಾದ ಮನಸ್ಸುಳ್ಳ ಶಾಂತಿಯ ಬದುಕಿನಲ್ಲಿ ಮುಂದೇನಾಯ್ತು?. ಎಸ್.ಗೋವಿಂದು ನಿರ್ದೇಶನ ಜತೆಗೆ ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿ ಮುಖ್ಯಮಂತ್ರಿಚಂದ್ರು, ಚಂದ್ರಕಲಾಮೋಹನ್, ಪ್ರಿಯಾಂಕ, ಅರ್ಜುನ್‌ಯೋಗಿ, ವಿಶ್ವಾಸ್‌ಭಾರದ್ವಾಜ್, ಇಳಾವಿಟ್ಲ, ಕೀರ್ತಿವೆಂಕಟೇಶ್, ಶಿವಾನಿ ಮುಂತಾದವರು ನಟಿಸುತ್ತಿದ್ದಾರೆ. ಶ್ರೀಮುತ್ತು ಸೆಲ್ವಂ ಕಥೆ, ಶ್ರೀಕಾಂತ್ ಸಂಭಾಷಣೆ, ರುದ್ರಮುನಿ ಬೆಳೆಗೆರೆ ಛಾಯಾಗ್ರಹಣ, ಅಂಬರೀಷ್ ಲೋನಾರಿ ಸಂಕಲನವಿದೆ. ’ಉದಯ ಟಿವಿ’ದಲ್ಲಿ ಜುಲೈ 22ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ’ಶಾಂತಿ ನಿವಾಸ’ ಪ್ರಸಾರವಾಗುತ್ತದೆ.

ความคิดเห็น •