DEVI APARAADHA KSHMAAPANA STHOTRA( ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ)| ಶ್ರೀಮದ್ ಶಂಕರಾಚಾರ್ಯರು|ದ ರಾ ಬೇಂದ್ರೆ
ฝัง
- เผยแพร่เมื่อ 18 ก.ย. 2024
- ಸಾಹಿತ್ಯ:- ಮೂಲ ರಚನೆ ಸಂಸ್ಕೃತ ಶ್ರೀಮದ್ ಶಂಕರಾಚಾರ್ಯರು
ಕನ್ನಡ ಭಾವಾನುವಾದ :- ದ ರಾ ಬೇಂದ್ರೆ
ಸಂಯೋಜನೆ ಹಾಗೂ ಗಾಯನ :- ರಾಘವೇಂದ್ರ ಬೀಜಾಡಿ
ಕೀಬೋರ್ಡ್ :- ದುಷ್ಯಂತ್
ರಿದಂಪ್ಯಾಡ್ :- ವೈಷ್ಣವ್
ಸೌಂಡ್ ಎಂಜಿನಿಯರ್:- ನಾಗರಾಜ್
ಅರವಿಂದ್ ಸ್ಟುಡಿಯೋ
#shankracharya #devotionalsongs #raghavendrabeejadi #himalayas
video credits. we use copy right free videos .. our humble pranmas to all the video makers
• Happy Durga Puja, Navr...
• Maa Bhavani Video Back...
• Durga maa navratri fir...
• काली माँ - Kali Mata -...
• Free Copyright Video B...
• Durga Background Video...
• God Durga Devi Animate...
ಸಾಹಿತ್ಯ
ದೇವೀ ಅಪರಾಧಕ್ಷಮಾಪಣ ಸ್ತೋತ್ರ
ಮಂತ್ರವರಿಯೆ, ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।
ಆಹ್ವಾನವರಿಯೆ, ನಾ ಧ್ಯಾನವರಿಯೆ, ನಾನರಿಯೆ ಶ್ರುತಿಯ ಕಥೆಯಾ।।
ಮುದ್ರೆಗಿದ್ರೆಗಳ ಅರಿಯೆ ನಾನು, ಕೂಸಾಗಿ ತೆರೆವೆ ಬಾಯಿ!
ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ!||
1
ಗೊತ್ತಿಲ್ಲ ವಿಧಿಯು, ಮೈಗಳ್ಳ ನಾನು, ಕೈಯ್ಯಲ್ಲಿ ಕಾಸು ఇల్ల,
ನಡೆಯಲಾರೆ ಒಳಗಾಗಿ, ಚರಣ ಕೈಬಿಟ್ಟು ಜಾರಿತಲ್ಲ! ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ!
ಹುಟ್ಟಬಹುದಲಾ ಕೆಟ್ಟಮಗುವು ; ಇರಲಾಸ ಕೆಟ್ಟ ತಾಯಿ!||
2
ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |ವಿರಲ-ತರಲ, ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ ಬಿಡಬೇಡ ಕೈಯ, ಅದು ತಕ್ಕುದಲ್ಲ ಕೇಳವ್ವ ಶಿವನ ಜಾಯೆ।
ಕೆಟ್ಟ ಮಗುವು ಹೋ! ಹುಟ್ಟಬಹುದು : ಇರಬಹುದೆ ಕೆಟ್ಟ ತಾಯಿ?"||
3
ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ । ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ!
ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ, ಇವಳೆ, ತಾಯೆ?॥
4
ಎಷ್ಟಂತ ಪೂಜೆ, ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ!
ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ!
ಓ ತಾಯಿ ನಿನ್ನ ಕೃಪೆ ಸಾಕು, ಉಳಿದವರು ಹಿಡಿಯಲೆನ್ನ ಬಿಡಲಿ!
ಆಧಾರವಿರದೆ, ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ!||
5
ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ! ಬಾಯಿಬಡಕ ನಾಯಡಗಂಬ ಜನವಾಣಿ ಅಮೃತಧಾಮ
ರಂಕ ಕೂಡ ಆತಂಕವಿರದೆ ತಾ ಕೋಟಿ ಕನಕ ಪಡೆವ ಜನನಿ ನಿನ್ನ ಜಪಮಹಿಮೆಯರಿಯದವ ಹೌದು ತೀರ ಬಡವll
6
ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ!
ಜಡೆಯ ಕಟ್ಟಿ, ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ
ತಲೆಯಬುರಡೆ ಕೈಯಲ್ಲಿ, ಭೂತಗಣ ಸುತ್ತಿಕೊಂಡೆ ಇರುವ
ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ||
7
ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ! ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ!!
ಅಂತೆ ನಿನ್ನ ಬೇಡುವೆನು ನಾನು ಆಮರಣ ತಪಿಸುತಿರಲಿ!
ಓ ಭವಾನಿ ರುದ್ರಾಣಿ ಶಿವಶಿವೇ ಎಂದು ಜಪಿಸುತಿರಲಿ!||
8
ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ! ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ!
ಓ ಶ್ಯಾಮೆ ! ನೀನೆ ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ
ಅದು ನಿನಗೆ ಸಹಜ, ಇದು ನನಗೆ ಸಹಜ, ಕರುಣೆಯನೆ ಬೇಡುತಿರುವೆ!!||
9
ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ! ಹೇ ದುರ್ಗೆ ! ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ!!
ಇದು ಢೋಂಗು, ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ।
ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ?॥
10
ಜಗದಂಬೆ, ಬೇರೆ ವೈಚಿತ್ರ್ಯ ಬೇಕೆ? ಕರುಣೆಯಲಿಮಾಡು ಎಲ್ಲ !
ಅಪರಾಧವೆಷ್ಟೆ ಮಾಡಿದರು ಮಗುವು, ತಾಯೇನೂ ಬಿಡುವದಿಲ್ಲ
ಪಾಪಘ್ನಿ ನಿನ್ನ ಸಮರಿಲ್ಲ, ಪಾಪದಲಿ ನನಗೆ ಇಲ್ಲ ಜೋಡು!
ಮಹದೇವಿ! ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು!!
ಶ್ರೀಮದ್ ಶಂಕರಾಚಾರ್ಯರ ಸ್ತೋತ್ರದ ಭಾವಾನುವಾದ.
🖋 ದ ರಾ ಬೇಂದ್ರೆ
• Green Leaves Forest Sl...
ತುಂಬಾ ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ 🙏🙏🙏
ಬಾವಗೀತೆಗಳ ಸವಿ ಉಂಡಾಯ್ತು ಇನ್ನೂ ನಿಮ್ಮ ಸುಮದರ ಧ್ವನಿ ಯಲ್ಲಿ ಭಕ್ತಿಗೀತೆ ಕೇಳುವ ಅವಕಾಶ 🙏🏻🙏🏻👏🏻👏🏻
ಎಷ್ಟು ಸಲ ಕೇಳಿದ್ರೂ ತೃಪ್ತಿ ಆಗೋಲ್ಲ, ಕೇಳ್ತಾ ಕೇಳ್ತಾ ಕಣ್ಣೀರು ತರಿಸುತ್ತೆ. ಅಷ್ಟು ಭಾವಪೂರ್ಣವಾಗಿ ಹಾಡಿದ್ದೀರಿ...ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಗಾನಲಹರಿ
ಹೀಗೇ ಮುಂದುವರೆಯಲಿ.
ಧನ್ಯವಾದಗಳು👌👌🙏🙏
Wow nanu danya 🎉🎉
🙏🙏🙏🙏🙏
❤❤❤❤
ಮೈ ಮನ ರೋಮಾಂಚನದಿಂದ ಪುಳ್ಕಿತಗೊಂಡಿತು.ದೇವಿ ನಿಮ್ಮೆಲ್ಲರಿಗೂ ಶುಭ ಆಶೀರ್ವಾದ ಮಾಡಲಿ. ಗಾಯತ್ರಿ ಸ್ತೋತ್ರಂ ಕೂಡ ಅತ್ಯದ್ಭುತ ವಾಗಿ ಮೂಡಿ ಬಂದಿದೆ.
ಜಗದ್ಗುರುಗಳ ಸ್ತೋತ್ರ. ನಿಮ್ಮ ಕಂಠ ದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏🙏🚩🚩🚩🌺🌺🌺🌺
🙏🏻
ಆಹಾ! ಎಷ್ಟು ಸುಂದರ ರಚನೆ ಮತ್ತು ಗಾಯನ! ಧನ್ಯಳಾದೆ.🙏🙏🙏
❤️❤️🙏🙏
ಕಣ್ತುಂಬಿ ಬಂತು, ಮನದುಂಬಿ ಬಂತು, ಮತ್ತೆ ಮತ್ತೆ ಕೇಳುತ್ತಿದ್ದೇನೆ. ಜೈ ಮಾ.
❤❤❤🎉🎉❤❤❤
ಕೇಳುಗರ ಕಿವಿಯಲ್ಲಿ ಈ ಜ್ಞಾನಾಮೃತ ಪ್ರವಹಿಸಿ ಸಾಹಿತ್ಯ ಹೃದಯ ಸೇರುವಂತಿದೆ ❤🙏🏻
ಕಣ್ಮುಚ್ಚಿ ಕೇಳುತಿದ್ರೆ ಆಹಾ.. ಅದ್ಭುತವಾದ ಲೋಕದಲ್ಲಿ ತೇಲುವಂತಿದೆ 🙏🙏🙏
ಬಹಳ ಚೆನ್ನಾಗಿದೆ. ಈ ಹಾಡಿಗಾಗಿ ಧನ್ಯವಾದ ಗಳು.
ತುಂಬಾ ಅದ್ಭುತವಾಗಿ ಮೂಡಿಬಂದಿದೆ.. ಕೇಳಲು ತುಂಬಾ ಖುಷಿಯಾಗುತ್ತದೆ
ಆಹಾ!!🙏🙏🙏
Very nice
ಭಕ್ತಿಭಾವ ತುಂಬಿದ ಗೀತೆ 😊
Shree Mata..🔱🙏
ವರ್ಣಿಸಲು ಪದವಿಲ್ಲ ಗುರುಗಳೇ, ದಿನಕ್ಕೆ ನಾಲ್ಕು ಬಾರಿ ಕೇಳುತ್ತೇನೆ. ಹೋಗಿ ತಾಯಿಯ ಜಪ ಮಾಡೋಣ ಅನಿಸುತ್ತದೆ ಹಾಗೆ ಕಣ್ಣಿನಲ್ಲಿ ನೀರು ಬಂದು ಭಾವ ಶುದ್ದಿಯಾಗುತ್ತದೆ. ಈ ಹಾಡನ್ನು ಕೇಳುವಾಗ ಜಗನ್ಮಾತೆಯನ್ನು ಧ್ಯಾನಿಸಲು ಇಚ್ಛಾಶಕ್ತಿ ಜಾಗೃತವಾಗುತ್ತದೆ. ನಿಮಗೆ ಕೋಟಿ ಕೋಟಿ ನಮನಗಳು..... 🙏🏻🙏🏻🙏🏻🙏🏻🙏🏻💐
ಸಾಹಿತ್ಯದ ತಕ್ಕಂತೆ ತಮ್ಮ ಗಾಯನ ಮನಸ್ಸಿಗೆ ಆನಂದ ತರುವ ಮನದಾಳಕ್ಕೆ ಕರೆದು ಕೊಂಡು ಹೋಗುತ್ತದೆ. ಧನ್ಯೋಸ್ಮಿ 😊🙏💕
ದೇವಿ ಸ್ತೋತ್ರವು ನಿಮ್ಮ ಧ್ವನಿಯಲ್ಲಿ ಅದ್ಬುತವಾಗಿ ಬಂದಿದೆ👌👌❤🙏
ಧನ್ಯವಾದಗಳು,
Bendreyavara sahityakke bendreyare sati.hadu Keli janma sarthakavayitu❤❤❤❤❤
ಅದ್ಭುತವಾಗಿದೆ 🙏🙏🙏🙏
❤❤❤❤❤❤❤❤
ತುಂಬ ಚೆನ್ನಾಗಿ ಇದೇ. ಬರೆದಿರುವುದು, ಹಾಗೂ ಹಾಡಿರುವುದು ಅದ್ಭುತ..
Soulful divine devotional stothram beautiful singing
O bhavani shivashive namo namah
ತುಂಬಾ ಚೆನ್ನಾಗಿದೆ. ಧನ್ಯೋಸ್ಮಿ.
Jagadguru Shankaracharya jayanti munde adhbutha savi karngalu pavanavaytgu. Ellarigu pranamagalu.
Super sir ❤
Tumba Sarala kannadadalli ❤
❤ ತುಂಬಾ ಚೆನ್ನಾಗಿದೆ ಇದೇ ರೀತಿ ಕನಕ ದಾರ ಸ್ತೋತ್ರವನ್ನು ದಯವಿಟ್ಟು ಕನ್ನಡದಲ್ಲಿ ಅನುವಾದ ಮಾಡಿ ಹಾಡಿ ಎಂದು ಕೇಳಿಕೊಳ್ಳುತ್ತೇನೆ🙏🙏🙏
ಅದ್ಭುತವಾಗಿದೆ ವಂದನೆಗಳು
Super 💯😍
I'm your fan
ದೊಡ್ಡ ಮಾತು
🙏🙏
🙏🙏🙏🙏 Super singing
👌👌🙏🙏🙏🙏
ಅದ್ಭತ ಗುರುವೆ
🙏ಇನ್ನು ಕೇಳಬೇಕು ಅನಿಸುತಿದೆ
Thumbaa chennaagide ennukelabekenisuthide vandanegalu
ಶಿವೆ 🙏
ಅದ್ಭುತ ಸರ್, ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ
This sooo beautiful. Bendre has maintained both the poetic beauty and spiritual divinity of the original composition.
I don't believe that the original was written by Bhagawatpada Adi Shankaracharya. He did not live to be 80+ years old. It must have been written by some other Shankaracharya of one of the mutts.
ಬಹುಶಃ ಅವರು ಇದನ್ನು ಇತರರಿಗೆ ಬರೆದಿರಬಹುದು. ಸಾಮಾನ್ಯರು ಈ ರೀತಿ ಕ್ಷಮಾಪಣೆ ಕೇಳಲಿ ಎಂದು. ಏಕೆಂದರೆ ಶಂಕರರಿಗೆ ಮಂತ್ರ. ಕಾಶ್ಮೀರ ಶೈವ ತಂತ್ರ. ಶ್ರೀಚಕ್ರ ಯಂತ್ರ ಎಲ್ಲಾ ತಿಳಿದಿದ್ದಾಗ ತನಗೆ ಗೊತ್ತಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಭಕ್ತರಿಗಾಗಿ ಭಕುತನು ಹೀಗೆ ಕೇಳಲಿ ಎದು ಶಂಕರಾಚಾರ್ಯರು ಬರೆದಿರಬಹುದಲ್ಲವೆ!?/
ಹೌದು
In Sanskrit it is not mentioned 80+ year old. Mentioned before I cross my half of the age.
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ
@ 51 veena ಇಂದ ಕಳುಹಿಸಿದ್ದೇನೆ ಅದೇ ನೋಡಿ ಸರ್
ಮೇಲಿನ ಲಿಂಕ್ ನೋಡಿ
TH-cam link kalisiddeeni keli sir
ಇನ್ನೊಮ್ಮೆ ಕಳಿಸಿಕೊಡಿ.. ಇಲ್ಲಿ ಕಾಣಲಿಲ್ಲ
th-cam.com/video/ObN1hQtxkcc/w-d-xo.htmlsi=5-tTUew2r3aGHp7g@@RaghavendraBeejadi
ಆ ತಾಯಿ ಮಗನ ನಡುವೆ ಪ್ರೀತಿ ಯ ಅನುಕಂಪ ಧಾರೆಯಾಗಿ ಹರಿಯಿತು.ಜೈ ಗುರುದೇವ 🙏🙏
🙏🙏🙏
🙏🙏🙏🙏🙏
😊🙏🙏🙏
❤❤❤
🙏🙏🙏